ಕೋಲ್ಕತ್ತಾ : 'ಉತ್ತರ ಪ್ರದೇಶ'ದಲ್ಲಿ ಇತ್ತೀಚೆಗಷ್ಟೆ ನಡೆದಿದ್ದ ಘರ್ ವಾಪಸಿ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿರುವ ಆರ್.ಎಸ್.ಎಸ್ ಮುಖಂಡ ಮೋಹನ್ ಭಾಗವತ್, ಭಾರತ ಹಿಂದೂ ರಾಷ್ಟ್ರ ಇಲ್ಲಿರುವ ಹಿಂದೂಗಳು ಇಲ್ಲೇ ಹುಟ್ಟಿ ಬದುಕುತ್ತಿದ್ದಾರೆ ಅವರು ಎಲ್ಲಿಂದಲೋ ಬಂದವರಲ್ಲ ಎಂದು ಹೇಳಿದ್ದಾರೆ.
ಕೋಲ್ಕತ್ತಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಮೋಹನ್ ಭಾಗವತ್ ಹಿಂದೂಗಳು ಈಗ ಜಾಗೃತರಾಗುತ್ತಿದ್ದಾರೆ. ದಾರಿ ತಪ್ಪಿದವರನ್ನು ವಾಪಸ್ ಕರೆ ತರುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಘರ್ ವಾಪಸಿ ಕಾರ್ಯುಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಇದೇ ವೇಳೆ ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಪಾಕಿಸ್ತಾನ ಭಾರತದ ಭೂಮಿಯಾಗಿದೆ. 47ರಲ್ಲಿ ಉಂಟಾದ ಸಣ್ಣ ತಪ್ಪಿನಿಂದಾಗಿ ಪಾಕಿಸ್ತಾನ ಸೃಷ್ಠಿಯಾಯಿತು. ಇಂದು ಅದೇ ಪಾಕಿಸ್ತಾನದಿಂದಾಗಿ ಜಗತ್ತಿಗೆ ನೆಮ್ಮದಿ ಇಲ್ಲ ಎಂದು ಭಾಗವತ್ ಆರೋಪಿಸಿದ್ದಾರೆ.
ಪಾಕಿಸ್ತಾನದ ಭಯೋತ್ಪಾದನೆ, ಬಾಂಗ್ಲಾ ದೇಶದ ನಾಗರಿಕರ ನುಸುಳುವಿಕೆಯನ್ನು ಭಾರತ ಇಷ್ಟು ವರ್ಷ ಸಹಿಸಿಕೊಂಡಿದೆ. ಆದರೆ ಇನ್ನು ಮುಂದೆ ಈ ಎರಡೂ ದೇಶಗಳ ಆಕ್ರಮಣವನ್ನು ಭಾರತ ಸಹಿಸುವುದಿಲ್ಲ ಎಂದು ಭಾಗವತ್ ತಿಳಿಸಿದ್ದಾರೆ.