ನವದೆಹಲಿ : ಶಿಕ್ಷಣದಲ್ಲಿ ಮಹತ್ವದ ಪಾತ್ರ ವಹಿಸುವ ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆಯನ್ನು ಹೊಗಳಿರುವ ಯೋಗ ಗುರು ಬಾಬಾ ರಾಮ್ ದೇವ್ ಭಾರತದಲ್ಲಿ ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಹೇಳಿದ್ದಾರೆ.
ಭಾರತದ ಮೇಲೆ ಪಾಶ್ಚಾತ್ಯ ಸಂಸ್ಕೃತಿಯನ್ನು ಹೇರಲು ಬ್ರಿಟೀಷ್ ಆಡಳಿತಗಾರರು ಭಾರತದ ಭವ್ಯ ಪರಂಪರೆಯಾಗಿದ್ದ ಗುರುಕುಲ ಶಿಕ್ಷಣವನ್ನು ನಾಶ ಮಾಡಿದರು. ಈಗ ಮತ್ತೆ ಗುರುಕುಲ ಪದ್ಧತಿಯ ಶಿಕ್ಷಣ ವ್ಯವಸ್ಥೆ ಜಾರಿಗೆ ತರಬೇಕಿದೆ ಎಂದು ಬಾಬಾ ರಾಮ್ ದೇವ್ ಕರೆ ನೀಡಿದ್ದಾರೆ.
ನಮ್ಮ ದೇಶದ ಮುಂದಿನ ಪೀಳಿಗೆಗೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಕಲಿಸಲು ಲಾರ್ಡ್ ಡಾಲ್ ಹೌಸಿ ಗುರುಕುಲಗಳ ಬದಲು ಕಾನ್ವೆಂಟ್ ಶಾಲೆಗಳನ್ನು ಪ್ರಾರಂಭಿಸಿದ. ಈಗ ನಾವು ದೇಶಾದ್ಯಂತ 7 ಲಕ್ಷ ಗುರುಕುಲಗಳನ್ನು ಪ್ರಾರಂಭಿಸಿ ನಮ್ಮ ಸಂಸ್ಕೃತಿಯನ್ನು ಮತ್ತೆ ವಾಪಸ್ ತರಬೇಕಿದೆ ಎಂದು ಕರೆ ನೀಡಿದ್ದಾರೆ.