ಲಖ್ನೌ : 'ತಾಜ್ ಮಹಲ್' ನ್ನು ವಕ್ಫ್ ಬೋರ್ಡ್ ಗೆ ನೀಡಬೇಕೆಂಬ ಆಜಂ ಖಾನ್ ಬೇಡಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಲಕ್ಷ್ಮಿಕಾಂತ್ ವಾಜಪೇಯಿ, ತಾಜ್ ಮಹಲ್ ಹಿಂದೂಗಳ ದೇವಾಲಯ ಎಂದು ಹೇಳಿದ್ದಾರೆ.
ತೇಜೋ ಮಹಾಲಯ ದೇವಸ್ಥಾನದ ಭೂಮಿಯನ್ನು ರಾಜ ಜೈಸಿಂಗ್ ನಿಂದ ಮುಘಲ್ ದೊರೆ ಶಹಜಹಾನ್ ಖರೀದಿಸಿದ್ದ. ಇದಕ್ಕೆ ತಮ್ಮ ಬಳಿ ದಾಖಲೆ ಇರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ.
ತಾಜ್ ಮಹಲ್ ನಲ್ಲಿ ದಿನಕ್ಕೆ 5 ಬಾರಿ ನಮಾಜ್ ಮಾಡಲು ಅನುಮತಿ ಪಡೆಯುವ ಆಜಂ ಖಾನರ ಕನಸು ಎಂದಿಗೂ ನನಸಾಗುವುದಿಲ್ಲ, ತೇಜೋ ಮಹಾಲಯ ರಾಜ ಜೈಸಿಂಗ್ ನ ಅರಮನೆಯಾಗಿತ್ತು. ರಾಜ ಜೈಸಿಂಗ್ ಅರಮನೆಯಲ್ಲಿ ಶಿವನ ದೇವಾಲಯವಿತ್ತು. ಇತಿಹಾಸವೂ ಇದನ್ನೇ ಹೇಳುತ್ತದೆ. ಹಾಗಾಗಿ ತಾಜ್ ಮಹಲ್ ಹಿಂದೂ ದೇವಾಲಯ ಎಂದು ಲಕ್ಷ್ಮೀಕಾಂತ್ ವಾಜಪೇಯಿ ಸಮರ್ಥಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ತಾಜ್ ಮಹಲ್ ಕುರಿತು ಉತ್ತರ ಪ್ರದೇಶದ ಸಚಿವ ಆಜಂ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ತಾಜ್ ಮಹಲ್ ನ್ನು ವಕ್ಫ್ ಬೋರ್ಡ್ ಗೆ ಹಸ್ತಾಂತರಿಸಬೇಕು ಎಂದು ಬೇಡಿಕೆ ಮುಂದಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು ತಾಜ್ ಮಹಲ್ ಹಿಂದೂಗಳ ದೇವಾಲಯ ಎಂದು ವಾದಿಸುತ್ತಿದೆ.