ನವದೆಹಲಿ : 'ಕೇಂದ್ರ ಸರ್ಕಾರ' ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ತರಲು ಮುಂದಾಗಿದ್ದು ಎಲ್ಲವೂ ಸರ್ಕಾರ ಅಂದುಕೊಂಡಂತಯೇ ನಡೆದರೆ ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಶಿಕ್ಷಣ ಕ್ರಮ ಅಸ್ಥಿತ್ವಕ್ಕೆ ಬರಲಿದೆ.
ಆರ್.ಎಸ್.ಎಸ್&id=16436'>ಆರ್.ಎಸ್.ಎಸ್ ಹೊಸ ಶಿಕ್ಷಣ ನೀತಿಯನ್ನು ಸಿದ್ದಪಡಿಸಿದ್ದು ಕೇಂದ್ರ ಮಾನವ ಸಂಪನ್ಮೂಲ ಖಾತೆಯ ಸಚಿವೆ ಸ್ಮೃತಿ ಇರಾನಿ ಅವರಿಗೆ ಕರಡು ಪ್ರತಿಯನ್ನು ಸಲ್ಲಿಸಿದೆ.
ಆರ್.ಎಸ್.ಎಸ್&id=16436'>ಆರ್.ಎಸ್.ಎಸ್ ನಾಗಪುರದಲ್ಲಿರುವ ಶಿಕ್ಷಣ ವಿಭಾಗ ಬಿ.ಎಸ್.ಎಂ (ಭಾರತೀಯ ಶಿಕ್ಷಣ ಮಂಡಳ) ಸದಸ್ಯರು ಹೊಸ ಕರಡು ನೀತಿಯನ್ನು ಸಿದ್ದಪಡಿಸಿದ್ದು, ಜೈಪುರದಲ್ಲಿ ಮುಂದಿನ ವರ್ಷದ ಜನವರಿ 17 18ರಂದು ನಡೆಯಲಿರುವ 'ಬಲಿಷ್ಠ ರಾಷ್ಟ್ರಕ್ಕಾಗಿ ಶಿಕ್ಷಣ ನೀತಿ' ಸಮ್ಮೇಳನದಲ್ಲಿ ಹೊಸ ನೀತಿಯ ಬಗ್ಗೆ ಚರ್ಚೆ ನಡೆಯಲಿದೆ.
ಹೊಸ ಶಿಕ್ಷಣ ನೀತಿ ಅಳವಡಿಸಿದ್ದಲ್ಲಿ ವಿದ್ಯಾರ್ಥಿಗಳು ಸಾಮಾನ್ಯ ಶಿಕ್ಷಣ ಕಲಿತ ಮೇಲೆ ತರಗತಿ ಬಿಟ್ಟು ಉದ್ಯೋಗಕ್ಕೆ ಸೇರಿ ಬಳಿಕ ಮತ್ತೆ ತರಗತಿಗೆ ಸೇರಬಹುದು. ಕಾಲೇಜು ಶಿಕ್ಷಣ ಉದ್ಯೋಗ ಕೇಂದ್ರಿತ ಶಿಕ್ಷಣವಾಗಿ ಬದಲಾಗಿ ವಿದ್ಯಾರ್ಥಿಗಳಿಗೆ ನೆರವಾಗಲಿದೆ ಎನ್ನುವುದು ಬಿ.ಎಸ್.ಎಂ ವಾದ.