ಮುಂಬೈ : 'ಇರಾಕ್' ನ ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಿ ಭಾರತಕ್ಕೆ ವಾಪಸ್ಸಾಗಿರುವ ಮುಂಬೈ ನ ಯುವಕ ಆರಿಫ್ ಮಜೀದ್ ನನ್ನು ಎನ್.ಐ.ಎ ಕೋರ್ಟ್ ಗೆ ನ.29ರಂದು ಹಾಜರು ಪಡಿಸಲಾಗುತ್ತದೆ.
ನ.28ರಂದು ಭಾರತಕ್ಕೆ ಆಗಮಿಸಿದ ಬೆನ್ನಲ್ಲೇ ಮಜೀದ್ ನನ್ನು ಎನ್.ಐ.ಎ ತಂಡ ವಿಚಾರಣೆಗೆ ಒಳಪಡಿಸಿತ್ತು. ವಿಚಾರಣೆ ನಡೆಸಿದ್ದು ಎನ್.ಐ.ಎ ಕೋರ್ಟ್ ಗೆ ಹಾಜರು ಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಕಲ್ಯಾಣ್ ನಗರದಿಂದ ಆರಿಫ್ ಮಜೀದ್, ಶಹೀನ್ ತಂಕೀ, ಫಹಾದ್ ಶೇಖ್ ಮತ್ತು ಅಮನ್ ತಂಡೇಲ್ ಎಂಬ ಯುವಕರು ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಿದ್ದಾರೆಂದು ಶಂಕಿಸಲಾಗಿತ್ತು.
ಉಗ್ರ ಸಂಘಟನೆ ಸೇರಿದ್ದಾರೆನ್ನಲಾದ ಯುವಕ ಭಾರತಕ್ಕೆ ವಾಪಸ್ಸಾಗಿರುವ ಬಗ್ಗೆ ಕುಟುಂಬ ಸದಸ್ಯರಿಂದ ಮಾಹಿತಿ ಪಡೆದಿರುವ ಎನ್.ಐ.ಎ ತನಿಖಾ ದಳ ಆರಿಫ್ ಮಜೀದ್ ನನ್ನು ವಿಚಾರಣೆಗೆ ಒಳಪಡಿಸಿದೆ.
ಆಗಸ್ಟ್ 26ರಂದು ಆರಿಫ್ ಸಿರಿಯಾದಲ್ಲಿ ಐ.ಎಸ್.ಐಸ್ ಗಾಗಿ ಹೋರಾಡುತ್ತಿದ್ದಾಗ ಹತ್ಯೆಗೀಡಾಗಿದ್ದಾನೆ ಎಂದು ಕುಟುಂಬ ಸದಸ್ಯರಿಗೆ ಮಾಹಿತಿ ದೊರೆತಿತ್ತು.