ನವದೆಹಲಿ : 'ಐ.ಎಸ್.ಐ.ಎಸ್' ಉಗ್ರ ಸಂಘಟನೆ ಸೇರಿದ್ದಾರೆಂದು ಹೆಳಲಾಗಿದ್ದ ನಾಲ್ವರು ಭಾರತೀಯ ಯುವಕರು ಮತ್ತೆ ಭಾರತಕ್ಕೆ ಬರಲು ಸಿದ್ಧರಿದ್ದಾರೆಎಂಬ ಸುದ್ದಿ ಬಹಿರಂಗವಾಗಿದೆ.
ಇರಾಕ್ ನ ಉಗ್ರ ಸಂಘಟನೆ ಐ.ಎಸ್.ಐ.ಎಸ್ ಸೇರಿದ್ದಾರೆಂದು ಹೇಳಲಾಗಿದ್ದ ಮುಂಬೈ ಮೂಲದ ಯುವಕರು ಭಾರತಕ್ಕೆ ವಾಪಸ್ಸಾಗಲು ಇಚ್ಛಿಸುತ್ತಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಪ್ರಕಾರ, ನಾಲ್ವರು ಯುವಕರ ಕುಟುಂಬ ಸದಸ್ಯರು ಕೇಂದ್ರ ಗೃಹ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದ್ದು ತಮ್ಮ ಮಕ್ಕಳು ಭಾರತಕ್ಕೆ ವಾಪಸ್ಸಾಗಲು ಇಚ್ಛಿಸುತ್ತಿದ್ದಾರೆ ಇದಕ್ಕೆ ಸರ್ಕಾರದ ಸಹಾಯ ಬೇಕು ಎಂದು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನಾಲ್ವರು ಯುವಕರ ಪೈಕಿ ಆ.27ರಂದು ಓರ್ವ ಯುವಕ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಭಾರತಕ್ಕೆ ಮರಳಲು ಇಚ್ಛಿಸುತ್ತಿರುವ ಉಳಿದ 3 ಯುವಕರ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಮಾಹಿತಿದೆ ಇದೆ ಎಂದು ಹೇಳಲಾಗಿದೆ.
ಮುಂಬೈ ಯುವಕರಾದ ಫಹಾದ್ ತನ್ವೀರ್ ಶೇಖ್, ಆರಿಫ್ ಮಜೀದ್, ಶಾಹೀನ್ ಫಾರೂಖೀ ಟಾಂಕಿ ಮತ್ತು ಅಮನ್ ನಯೀಂ ತಾಂಡೇಲ್ ಎಂಬ ನಾಲ್ವರು ಇರಾಕ್ ಗೆ ತೆರಳಿ ಐ.ಎಸ್.ಐ.ಎಸ್ ಸೇರಿದ್ದರು .