Untitled Document
Sign Up | Login    
Dynamic website and Portals
  
November 26, 2014

ಮೋದಿ ನಾಯಕತ್ವ ಮೆಚ್ಚಿ ಬಿಜೆಪಿ ಸೇರಿದ ಆಪ್ ಸ್ಥಾಪಕ ಸದಸ್ಯ ಅಶ್ವನಿ ಉಪಾಧ್ಯಾಯ

ಬಿಜೆಪಿಗೆ ಸೇರಿದ ಅಶ್ವನಿ ಉಪಾಧ್ಯಾಯ ಬಿಜೆಪಿಗೆ ಸೇರಿದ ಅಶ್ವನಿ ಉಪಾಧ್ಯಾಯ

ನವದೆಹಲಿ : 'ಆಮ್ ಆದ್ಮಿ ಪಕ್ಷ'ದ ಸ್ಥಾಪಕ ಸದಸ್ಯ ಅಶ್ವನಿ ಉಪಾಧ್ಯಾಯ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಸೇರ್ಪಡೆಗೊಂಡ ಅಶ್ವನಿ ಉಪಾಧ್ಯಾಯ, ಆಮ್ ಆದ್ಮಿ ಪಕ್ಷದ ಧೋರಣೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜಕೀಯದಲ್ಲಿರುವ ಭ್ರಷ್ಟಾಚಾರ, ಜಾತಿವಾದಗಳನ್ನು ನಿರ್ಮೂಲನೆ ಮಾಡಬೇಕೆಂದು ನಾವು ನಮ್ಮ ಕೆಲಸಗಳನ್ನು ಬಿಟ್ಟು ಆಮ್ ಆದ್ಮಿ ಪಕ್ಷ ಸೇರಿದ್ದೆವು ಆದರೆ ಯಾವುದನ್ನು ನಿರ್ಮೂಲನೆ ಮಾಡಬೇಕೆಂದಿದ್ದೆವೋ ಆ ಅಂಶಗಳನ್ನೇ ಪಕ್ಷದಲ್ಲಿ ಸೇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷ ತೊರೆಯುತ್ತಿರುವುದಾಗಿ ಅಶ್ವನಿ ಉಪಾಧ್ಯಾಯ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯಿಂದ ಪ್ರಭಾವಿತನಾಗಿದ್ದು ಬಿಜೆಪಿ ಸೇರುತ್ತಿರುವುದಾಗಿ ಅಶ್ವನಿ ಉಪಾಧ್ಯಾಯ ತಿಳಿಸಿದ್ದಾರೆ. ಅಲ್ಲದೇ ಮೋದಿ ಅವರ ನೇತೃತ್ವದಲ್ಲಿ ಮುಂದಿನ 10 ವರ್ಷಗಳಲ್ಲಿ ಭಾರತದ ಚಿತ್ರಣ ಸಂಪೂರ್ಣ ಬದಲಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಆಮ್ ಆದ್ಮಿ ಪಕ್ಷದ ಮುಖಂಡರಾದ ಸುಭಾಷ್ ತಲ್ವಾರ್, ರಾಜೇಶ್ ಗುಪ್ತ, ಸಲೀಲ್ ಕುಮಾರ್, ಯುವ ಕಾಂಗ್ರೆಸ್ ನಾಯಕ ದೀಪಕ್ ಕುಮಾರ್ ಅವರೂ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

ಜನವರಿ ಅಥವಾ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಂತದಲ್ಲಿ ಆಮ್ ಆದ್ಮಿ ಪಕ್ಷದ ಸ್ಥಾಪಕರೇ ಪಕ್ಷ ತೊರೆಯುತ್ತಿರುವುದು ಆಪ್ ಗೆ ಭಾರಿ ಮುಖಭಂಗ ಉಂಟುಮಾಡಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited