ನವದೆಹಲಿ : 'ಕಲ್ಲಿದ್ದಲು ನಿಕ್ಷೇಪ ಹಂಚಿಕೆ' ಹಗರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಏಕೆ ತನಿಖೆಗೆ ಒಳಪಡಿಸಿಲ್ಲ ಎಂದು ದೆಹಲಿ ವಿಶೇಷ ನ್ಯಾಯಾಲಯ ಸಿಬಿಐನ್ನು ಪ್ರಶ್ನಿಸಿದೆ.
ಯುಪಿಎ ಸರ್ಕಾರದ ಬಹುಕೋಟಿ ಕಲ್ಲಿದ್ದಲು ಹಗರಣ ತನಿಖೆ ನಡೆಸುತ್ತಿರುವ ಸಿಬಿಐ, ಉದ್ಯಮಿ ಕೆ.ಎಂ. ಬಿರ್ಲಾ , ಕಲ್ಲಿದ್ದಲು ಇಲಾಖೆ ಮಾಜಿ ಸಚಿವ ಪಿ.ಸಿ ಪರೇಖ್ ಮತ್ತು ಇನ್ನಿತರರನ್ನು ವಿಚಾರಣೆಗೆ ಒಳಪದಿಸಿದೆ ಆದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಏಕೆ ವಿಚಾರಣೆಗೊಳಪಡಿಸಿಲ್ಲ ಎಂದಿದೆ.
ಇದಕ್ಕೆ ಪ್ರತಿಕ್ರಿಯಿಸಿದ ತನಿಖಾ ಅಧಿಕಾರಿ, ಪ್ರಧಾನಿ ಕಚೇರಿಯ ಅಧಿಕಾರಿಗಳನ್ನು ತನಿಖೆಯ ವೇಳೆ ವಿಚಾರಣೆಗೊಳಪಡಿಸಲಾಗಿದೆ ಮತ್ತು ಕಲ್ಲಿದ್ದಲು ಸಚಿವರ ಹೇಳಿಕೆ ಅಗತ್ಯವಿಲ್ಲ ಎಂದು ನಾವು ಮನಗಂಡಿದ್ದೇವೆ ಎಂದಿದ್ದಾರೆ.
ಆದಾಗ್ಯೂ, ಆವಾಗ ಕಲ್ಲಿದ್ದಲು ಸಚಿವರಾಗಿದ್ದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲು ನಮಗೆ ಅನುಮತಿ ಇರಲಿಲ್ಲ ಎಂದು ತನಿಖಾ ಅಧಿಕಾರಿಗಳು ಕೋರ್ಟ್ ಮುಂದೆ ಸ್ಪಷ್ಟನೆ ನೀಡಿದ್ದಾರೆ.