ಕೋಲ್ಕತ್ತ : ನವೆಂಬರ್ 30ರಂದು ಕೋಲ್ಕತ್ತಾದಲ್ಲಿ ನಡೆಯಬೇಕಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆಯಲಿರುವ ರ್ಯಾಲಿಗೆ ಅನುಮತಿ ನೀಡಲು ಕೋಲ್ಕತ್ತಾ ನಗರ ಸಭೆ ನಿರಾಕರಿಸಿದೆ.
ಕೋಲ್ಕತ್ತಾದ ವಿಕ್ಟೊರಿಯಾ ಹೌಸ್ ಮುಂಭಾಗದಲ್ಲಿ ಸಭೆ ನಡೆಸಲು ಬಿಜೆಪಿ ತೀರ್ಮಾನಿಸಿತ್ತು. ವಿಕ್ಟೊರಿಯಾ ಹೌಸ್ ನಲ್ಲಿ ಸಾಮಾನ್ಯವಾಗಿ ತೃಣಮೂಲ ಕಾಂಗ್ರೆಸ್ ಪಕ್ಷ ಜುಲೈ 21ರಂದು ಹುತಾತ್ಮರ ದಿನಾಚರಣೆ ಆಚರಿಸುತ್ತರೆ. ಈ ಸ್ಥಳದಲ್ಲಿ ಬಿಜೆಪಿ ರ್ಯಾಲಿ ನಡೆಸಲು ನಗರ ಸಭೆ ಅನುಮತಿ ನಿರಾಕರಿಸಿದೆ.
ವಾಹನ ದಟ್ಟಣೆ ಮತ್ತು ಕಾನೂನು ಸುವ್ಯವಸ್ಥೆಯ ಕಾರಣ ಹೇಳಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ವಿಕ್ಟೊರಿಯಾ ಹೌಸ್ ನಲ್ಲಿ ಕಾರ್ಯಕ್ರಮ ನಡೆಸಲು ಬಿಜೆಪಿ ಜುಲೈನಲ್ಲೇ ಅನುಮತಿ ಕೇಳಿತ್ತು. ಆದರೆ ಏಕಾಏಕಿ ಅನುಮತಿ ನಿರಾಕರಣೆ ಮಾಡಿರುವುದಕ್ಕೆ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ವೆಂಬರ್ 30 ಭಾನುವಾರವಾಗಿದ್ದು ಪೊಲೀಸರು ನೀಡಿರುವ ಕಾರಣ ಸಮರ್ಪಕವಾಗಿಲ್ಲ ಎಂದು, ಕೋಲ್ಕತ್ತ ಉಚ್ಛ ನ್ಯಾಯಾಲಯದಲ್ಲಿ ಈ ನಿರ್ಧಾರವನ್ನು ಪ್ರಶ್ನಿಸಿತ್ತು.
ಆದರೆ ನ್ಯಾಯಾಲಯ ನಗರ ಸಭೆ ಮತ್ತು ಪ್ರಾದೇಶಿಕ ಅಗ್ನಿ ಸುರಕ್ಷತಾ ಅಧಿಕಾರಿಗಳಿಂದ ಪರವಾನಗಿ ಪಡೆಯುವಂತೆ ಸೂಚಿಸಿತ್ತು.
ಈಗ ಇದೇ ಕಾರಣಗಳಿಗೆ ಕಲ್ಕತ್ತಾ ನಗರ ಸಭೆ ಅನುಮತಿ ನಿರಾಕರಿಸಿದ್ದು ಬಿಜೆಪಿ ಪಾಳಯದಲ್ಲಿ ಆಕ್ರೋಶ ಸೃಷ್ಟಿಸಿದೆ.