Untitled Document
Sign Up | Login    
Dynamic website and Portals
  
November 19, 2014

ರಾಮ್ ಪಾಲ್ ಆಶ್ರಮದಲ್ಲಿ ನಾಲ್ಕು ಶವ ಪತ್ತೆ: ಹೊಸ ಕಾರ್ಯಾಚರಣೆಗೆ ಪೊಲೀಸರು ಸಜ್ಜು

ಹಿಸ್ಸಾರ್ : ಸ್ವಘೋಷಿತ ದೇವಮಾನವ ವಿವಾದಾತ್ಮಕ ಸಂತ ರಾಮ್ ಪಾಲ್ ಕೂಡಲೇ ಶರಣಾಗತನಾಗಬೇಕು ಎಂದು ಹರ್ಯಾಣ ಹೈಕೋರ್ಟ್ ಮತ್ತು ಪೊಲೀಸರು ನೀಡಿರುವ ಗಡವು ಮುಗಿದಿದ್ದು, ಹರ್ಯಾಣ ಪೊಲೀಸರು ಹೊಸ ಕಾರ್ಯಾಚರಣೆಗೆ ಸಿದ್ಧರಾಗಿದ್ದಾರೆ.

ದೇವಮಾನವನ್ನು ಬಂಧಿಸಲು ನಡೆದ ವಿಫಲ ಕಾರ್ಯಾಚರಣೆಯಲ್ಲಿ ಹರ್ಯಾಣ ಪೊಲೀಸರು ರಾಂಪಾಲ್ ನ ಭಕ್ತರ ಜೊತೆ ಘರ್ಷಣೆಗಿಳಿದಿದ್ದರು. ಈ ಸಮಯದಲ್ಲಿ ವರದಿಗಾರರೂ ಸೇರಿದಂತೆ ಸುಮಾರು 2೦೦ ಜನರು ಗಾಯಗೊಂಡಿದ್ದಾರೆ.

ಈಗ ಬರ್ವಾಲ ಪೋಲೀಸ್ ಠಾಣೆಯಲ್ಲಿ ರಾಮ್ ಪಾಲ್ ಮತ್ತು ಆತನ ಭಕ್ತರ ವಿರುದ್ಧ ಹೊಸ ಮೊಕದ್ದಮೆ ದಾಖಲಿಸಲಾಗಿದ್ದು, ಪೊಲೀಸರು ನವೀನ ಕಾರ್ಯಾಚರಣೆಗೆ ಸನ್ನದ್ಧರಾಗಿದ್ದಾರೆ.
ಆಶ್ರಮದ ಭಕ್ತರಿಗೆ ಆಶ್ರಮ ತೊರೆಯಲು ಬೆಳಗ್ಗೆ 10 ಘಂಟೆಯ ಸಮಯದ ಗಡುವು ನೀಡಿದ್ದ ಪೊಲೀಸರಿಗೆ ರಾಮ್ ಪಾಲ್ ಆಶ್ರಮದಲ್ಲೇ ತಂಗಿದ್ದಾನೊ ಇಲ್ಲವೋ ಎಂಬುದರ ಬಗ್ಗೆ ಸುಳಿವಿಲ್ಲ.

ರಾತ್ರಿ ಸುಮಾರು 10,000 ರಾಮ್ ಪಾಲ್ ಬೆಂಬಲಿಗರನ್ನು ಸತ್ಲೋಕ್ ಆಶ್ರಮದಿಂದ ತೆರವು ಮಾಡಿ, ಸರ್ಕಾರಿ ಬಸ್ಸುಗಳಲ್ಲಿ ಸುರಕ್ಷಿತವಾಗಿ ಹಿಸಾರ್ ಗೆ ಕಳುಹಿಸಿದ್ದೇವೆ. ಆಶ್ರಮದಲ್ಲಿ ಇನ್ನೂ ಐದುಸಾವಿರ ಭಕ್ತರಿದ್ದು, ಶೀಘ್ರದಲ್ಲಿಯೇ ಎಲ್ಲರನ್ನೂ ಆಶ್ರಮದಿಂದ ರಕ್ಷಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ರಾಮ್ ಪಾಲ್ ಆಶ್ರಮದಲ್ಲಿ ನಾಲ್ವರ ಶವ ಪತ್ತೆಯಾಗಿದೆ. ಸಾವಿಗೆ ಕಾರಣವೆನೆಂಬುದು ಇನ್ನೂ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ಬಳಿಕೆ ಹೆಚ್ಚಿನ ಮಾಹಿತಿ ಸಿಗಲಿದೆ. ರಾಮ್ ಪಾಲ್ ಗೆ ಶರಣಾಗುವಂತೆ ಸೂಚಿಸಿದ್ದೆವೆ ಎಂದು ಹರ್ಯಾನ ಡಿಸಿಪಿ ಎಂ.ಎನ್.ವಸಿಷ್ಠ ತಿಳಿಸಿದ್ದಾರೆ.

12 ಎಕರೆ ಜಾಗದಲ್ಲಿರುವ ಆಶ್ರಮವನ್ನು 2೦,೦೦೦ ಕೆಂದ್ರ ಮೀಸಲು ಪಡೆ ಮತ್ತು ಹರ್ಯಾಣ ಪೋಲೀಸರ ಶೀಘ್ರ ಕಾರ್ಯಾಚರಣೆ ಪಡೆಯ ಭದ್ರತಾ ಸಿಬ್ಬಂದಿ ಸುತ್ತುವರೆದಿದ್ದು ಯಾವ ಕ್ಷಣದಲ್ಲಾದರೂ ರಾಮ್ ಪಾಲ್ ಮೇಲೆ ಕಾರ್ಯಾಚರಣೆ ಶುರುವಾಗಬಹುದಾಗಿದೆ. ಆಶ್ರಮಕ್ಕಿದ್ದ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಪೊಲೀಸರು ಕಡಿತಗೊಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited