ನವದೆಹಲಿ : 'ಇಂಡಿಯಾ'ವನ್ನು ಭಾರತವನ್ನಾಗಿ ಮರುನಾಮಕರಣ ಮಾಡಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್, ನ. 10ರಂದು ತಿರಸ್ಕರಿಸಿದೆ.
ದೇಶಕ್ಕೆ ಮರುನಾಮಕರಣ ಮಾಡುವ ವಿಷಯದಲ್ಲಿ ಸಂಬಂಧಪಟ್ಟ ಪ್ರಾಧಿಕಾರದಿಂದ ಸೂಕ್ತ ಬೆಂಬಲ ವ್ಯಕ್ತವಾದ ನಂತರ ಅರ್ಜಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಹೆಚ್.ಎಲ್ ದತ್ತು ನೇತೃತ್ವದ ನ್ಯಾಯಪೀಠ ಆದೇಶ ನೀಡಿದೆ.
"ಇಂಡಿಯಾದಿಂದ ಭಾರತ ಎಂದು ನಾಮಕರಣ ಮಾಡುವ ಸಂಬಂಧ ಏಕಾಏಕಿ ಸುಪ್ರೀಂ ಕೋರ್ಟ್ ಗೆ ಅರ್ಜಿಸಲ್ಲಿಸುವುದು ಸೂಕ್ತವಲ್ಲ, ಮರುನಾಮಕರಣಕ್ಕೆ ಸೂಕ್ತವಾದ ಬೆಂಬಲದೊರಕಿದ ನಂತರ ಕೋರ್ಟ್ಗೆ ಅರ್ಜಿ ಸಲ್ಲಿಸಿ" ಎಂದು ಕೋರ್ಟ್ ಅರ್ಜಿದಾರರಿಗೆ ಸೂಚನೆ ನೀಡಿದೆ.
ಮರುನಾಮಕರಣ ಕುರಿತಂತೆ ಇತರೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅದಕ್ಕೆ ಸೂಕ್ತ ರೀತಿಯ ಬೆಂಬಲ ದೊರಕಿದರೆ ನಂತರದ ದಿನಗಳಲ್ಲಿ ಬಗ್ಗೆ ಆದೇಶ ನೀಡಲು ಸಾಧ್ಯ ಎಂದು ನ್ಯಾ.ಹೆಚ್.ಎಲ್ ದತ್ತು ಹೇಳಿದ್ದಾರೆ.