ನವದೆಹಲಿ : 'ಭಾರತ-ವೆಸ್ಟ್ ಇಂಡೀಸ್' ಸರಣಿ ಅರ್ಧದಲ್ಲೇ ರದ್ದಾದ ಹಿನ್ನಲೆಯಲ್ಲಿ 250 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಬಿಸಿಸಿಐ, ಕ್ರಿಕೆಟ್ ಮಂಡಳಿ&id=16109'>ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯನ್ನು ಒತ್ತಾಯಿಸಿದೆ. ಸರಣಿ ರದ್ದಾಗಿದ್ದರಿಂದ ಬಿಸಿಸಿಐಗೆ ಕೊಟ್ಯಂತರ ರೂಪಾಯಿ ನಷ್ಟವಾಗಿದೆ. ಹೀಗಾಗಿ 250 ಕೋಟಿ ಪರಿಹಾರ ನೀಡುವಂತೆ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ಗೆ ಬಿಸಿಸಿಐ ಒತ್ತಡ ಹೇರಿದೆ.
ಪರಿಹಾರ ನೀಡದೇ ಇದ್ದರೆ ಐಸಿಸಿಯಲ್ಲಿ ಕಾನೂನು ಮೊಕದ್ದಮೆ ದಾಖಲಿಸುವುದಾಗಿ ಬಿಸಿಸಿಐ ಎಚ್ಚರಿಕೆ ನೀಡಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿ ಪ್ರಾಯೋಜಕತ್ವಕ್ಕೆ ಅನೇಕ ಪ್ರಮುಖ ಕಂಪನಿಗಳು ಮುಂದೆ ಬಂದಿದ್ದವು. ಆದರೆ ಸರಣಿ ಅರ್ಧಕ್ಕೆ ಮೊಟಕುಗೊಂಡಿರುವುದರಿಂದ ಕಂಪನಿಗಳಿಗೆ ನಷ್ಟ ಉಂಟಾಗಿದೆ. ಇದನ್ನು ಬಿಸಿಸಿಐ ತುಂಬಿಕೊಡಲು ಸಾಧ್ಯವಿಲ್ಲ ಈ ಹಿನ್ನೆಲೆಯಲ್ಲಿ ಪರಿಹಾರ ನೀಡಬೇಕೆಂದು ಕ್ರಿಕೆಟ್ ಮಂಡಳಿ&id=16109'>ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗೆ ಪತ್ರದಲ್ಲಿ ತಾಕೀತು ಮಾಡಿದೆ.
ಯಾವುದೇ ಸರಣಿ ನಿಗದಿಯಾದ ಮೇಲೆ ಮೊಟಕುಗೊಳಿಸಲು ಐಸಿಸಿ ಕಾನೂನಿನಲ್ಲಿ ಅವಕಾಶವಿಲ್ಲ. ಹಾಗೊಂದು ರದ್ದುಪಡಿಸಿದರೆ ಅದರಿಂದ ಆತಿಥೇಯರಿಗೆ ಉಂಟಾಗುವ ನಷ್ಟವನ್ನು ಅಲ್ಲಿನ ಮಂಡಳಿಯೇ ತುಂಬಿಕೊಡಬೇಕೆಂದು ಐಸಿಸಿ ನಿಯಮಾವಳಿಯಲ್ಲಿ ಷರತ್ತು ವಿಧಿಸಲಾಗಿದೆ.
ಆದರೆ ಬಿಸಿಸಿಐ ಬರೆದಿರುವ ಪತ್ರದ ಬಗ್ಗೆ ವಿಂಡೀಸ್ ಬೋರ್ಡ್ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ. ವೇತನ ತಾರತಮ್ಯದಿಂದ ಸರಣಿ ಮಧ್ಯೆಯೇ ವಿಂಡೀಸ್ ಆಟಗಾರರು ತವರಿಗೆ ವಾಪಾಸ್ ಹೋಗಿದ್ದರು. ಹೀಗಾಗಿ ಒಂದು ಏಕದಿನ ಪಂದ್ಯ, ಒಂದು ಟಿ20 ಮತ್ತು 3 ಟೆಸ್ಟ್ ಗಳು ರದ್ದಾಗಿದ್ದವು. ಇದರಿಂದ ಭಾರತೀಯ ಕ್ರಿಕೆಟ್ ಗೆ ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು.