ನವದೆಹಲಿ : ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯ ಸ್ಮರಣೆಯ ದಿನವನ್ನು ಆಚರಿಸದೇ, ಪಟೇಲರ ಜನ್ಮದಿನವನ್ನು ದೇಶಾದ್ಯಂತ ಅದ್ಧೂರಿಯಿಂದ ಆಚರಿಸುತ್ತಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.
ಪಟೇಲರ ಜನ್ಮದಿನವನ್ನು ಆಚರಿಸುತ್ತಿರುವ ನರೇಂದ್ರ ಮೋದಿ, ಸರ್ದಾರ್ ಪಟೇಲ್ ಅವರ 'ಪರಂಪರೆ' ಯನ್ನು ಕದಿಯುತ್ತಿರುವ ಕಳ್ಳ ಎಂದು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ದೂರಿದ್ದರೆ, ಮನಸ್ಸಲ್ಲಿ ಕೊಳೆತ ವಿಚಾರಗಳನ್ನಿಟ್ಟುಕೊಂಡು, ರಸ್ತೆ, ಕಚೇರಿ ಸ್ವಚ್ಛಗೊಳಿಸಿದರೆ ದೇಶ ಸ್ವಚ್ಛವಾಗುವುದಿಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಗುಲ್ಬರ್ಗಾದಲ್ಲಿ ಮಾತನಾಡಿರುವ ಖರ್ಗೆ, ದೇಶಕ್ಕಾಗಿ ಪ್ರಾಣಕೊಟ್ಟ ನಾಯಕಿಯನ್ನು ಸ್ಮರಿಸದ ಕೇಂದ್ರ ಸರ್ಕಾರ ಕೊಳೆತ ಮನಸ್ಥಿತಿ ಹೊಂದಿದೆ. ಮನಸ್ಸಿನಲ್ಲಿ ಕೊಳೆತ ವಿಚಾರಗಳನ್ನು ಹೊಂದಿದ್ದರೆ ದೇಶ ಎಂದಿಗೂ ಸ್ವಚ್ಛವಾಗುವುದಿಲ್ಲ. ಮನಸ್ಸು ಸ್ವಚ್ಛವಾಗಿದ್ದರೆ ದೇಶವೂ ಸ್ವಚ್ಛವಾಗಿರುತ್ತದೆ ಎಂದು ಹೇಳಿದ್ದಾರೆ.