Untitled Document
Sign Up | Login    
Dynamic website and Portals
  
October 31, 2014

ಏಕತಾ ಓಟಕ್ಕೆ ಪ್ರಧಾನಿ ಮೋದಿ ಚಾಲನೆ

ಪ್ರಧಾನಿ ನರೇಂದ್ರ ಮೋದಿ  (ಫೈಲ್ ಚಿತ್ರ) ಪ್ರಧಾನಿ ನರೇಂದ್ರ ಮೋದಿ (ಫೈಲ್ ಚಿತ್ರ)

ನವದೆಹಲಿ : ಸರ್ದಾರ್ ವಲ್ಲಭಬಾಯಿ ಪಟೇಲರ ಜನ್ಮದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಏಕತಾ ಓಟಕ್ಕೆ ಚಾಲನೆ ನೀಡಿದ್ದಾರೆ.

ನವದೆಹಲಿಯ ಪಟೇಲ್ ಚೌಕ್ ನಲ್ಲಿನ ಸರ್ದಾರ್ ವಲ್ಲಭಬಾಯ್ ಪಟೇಲರ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪ ನಮನ ಸಲ್ಲಿಸಿದರು.

ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು,ಸರ್ದಾರ್ ವಲ್ಲಭಬಾಯ್ ಪಟೇಲರು ಆಧುನಿಕ ಭಾರತದ ನಿಜವಾದ ಶಿಲ್ಪಿ. ಅವರ ಜೀವನ ಧರ್ಮ ಆದರ್ಶಗಳಿಂದ ಕೂಡಿತ್ತು ಎಂದು ಅಭಿಪ್ರಾಯಪಟ್ಟರು.

ಪಟೇಲರ ಜೀವನ ನಮಗೆ ಆದರ್ಶವಾಗಿದೆ. ಅವರ ಧೈರ್ಯ, ದೇಶಪ್ರೇಮ ನಮಗೆ ಮಾದರಿಯಾಗಿದೆ. ಅವರು ತಮ್ಮ ಜೀವನದುದ್ದಕ್ಕೂ ದೇಶಕ್ಕಾಗಿ ತ್ಯಾಗ, ಬಲಿದಾನಗಳನ್ನು ಮಾಡಿದ್ದರು. ದೇಶದ ಇತಿಹಾಸದಲ್ಲಿ ಅವರು ಎಂದಿಗೂ ಅಮರ. ಇತಿಹಾಸವನ್ನು ಅಳಿಸಲು ಯಾರಿಂದಿಲೂ ಸಾಧ್ಯವಿಲ್ಲ ಎಂದು ತಿಳಿಸಿದರು.

ಮಹಾತ್ಮಾ ಗಾಂಧೀಜಿ ಹಾಗೂ ಸರ್ದಾರ್ ವಲ್ಲಭಬಾಯ್ ಪಟೇಲರ ಜೋಡಿ ಅದ್ಭುತವಾಗಿತ್ತು. ದೇಶದ ರೈತರ ಅಭಿವೃದ್ಧಿಗಾಗಿ ಇಬ್ಬರು ಮಹತ್ಮಾರು ಶ್ರಮಿಸಿದ್ದಾರೆ. ದೇಶಕ್ಕಾಗಿ ಅವರ ಕೊಡುಗೆ ಅಪಾರ ಎಂದು ಸ್ಮರಿಸಿದರು.

ಪಟೇಲರ 139ನೇ ಜನ್ಮದಿನಾಚರಣೆ ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ದೇಶದ ಏಕತೆಗಾಗಿ ನವದೆಹಲಿಯ ಇಂಡಿಯಾಗೇಟ್‌ನಿಂದ ಮೋದಿ ಏಕತಾ ಓಟಕ್ಕೆ ಚಾಲನೆ ನೀಡಿದರು. ಈ ವೇಳೆ ಜನತೆಗೆ ಮೋದಿ ಐಕ್ಯತೆಯ ಪ್ರತಿಜ್ನಾವಿಧಿ ಬೋಧಿಸಿದರು.

ಏಕ್ ಭಾರತ ಶ್ರೇಷ್ಠ ಭಾರತ ಎಂಬ ಧ್ಯೇಯವಾಕ್ಯದೊಂದಿಗೆ ಇಂಡಿಯಾಗೇಟ್ ನಿಂದ ಆರಂಭವಾದ ಏಕತಾ ಓಟ ವಿಜಯ್ ಚೌಕ್ ವರೆಗೆ ಸುಮಾರು 1.4 ಕಿ.ಮೀ ವರೆಗೆ ಸಾಗಿತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited