ಕೇರಳ : 'ಮಧ್ಯ ಮಾರಾಟ' ನಿಷೇಧಕ್ಕೆ ಆದೇಶ ಹೊರಡಿಸಿದ್ದ ಕೇರಳ ಸರ್ಕಾರದ ಕ್ರಮವನ್ನು ಕೇರಳ ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ.
ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿರುವ ಕಾರಣ ಕೇರಳದಲ್ಲಿ ಅ.30ರಿಂದ ತ್ರಿಸ್ಟಾರ್ ಹೊಟೇಲ್ ಗಳಲ್ಲಿ ಮಧ್ಯ ಮಾರಾಟ ಸಂಪೂರ್ಣವಾಗಿ ನಿಲ್ಲಲಿದ್ದು ಪಂಚತಾರಾ ಹೊಟೇಲ್ ಗಳಲ್ಲಿ ಮಾತ್ರ ಮಧ್ಯ ಮಾರಾಟ ಮಾಡಬಹುದಾಗಿದೆ. ಈ ತೀರ್ಪನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ ಎಂದು ಕೇರಳದ ಬಾರ್ ಮಾಲಿಕರ ಸಂಘ ತಿಳಿಸಿದೆ.
ಇದೇ ವೇಳೆ ಪಂಚತಾರಾ ಹೊಟೇಲ್ ಗಳಲ್ಲಿ ಭಾನುವಾರದಂದೂ ಮಧ್ಯವನ್ನು ಮಾರಲು ಅವಕಾಶವನ್ನು ಕೊಡಬೇಕು ಎಂದು ಕೋರ್ಟ್ ಸರ್ಕಾರಕ್ಕೆ ತಿಳಿಸಿದೆ. ಈ ಹಿಂದೆ, ಪಂಚತಾರಾ ಹೊಟೇಲ್ ಗಳಲ್ಲಿ ಭಾನುವಾರ ಮಧ್ಯ ಮಾರಾಟ ಮಾಡಬಾರದು ಎಂದು ತಾಕೀತು ಮಾಡಿತ್ತು.
ಕೇರಳ ರಾಜ್ಯದ ಮುಖ್ಯಮಂತ್ರಿ, ಆಗಸ್ಟ್ ನಲ್ಲಿ ಮಧ್ಯ ನಿಷೇಧ ಮತ್ತು 700ಬಾರ್ ಗಳನ್ನು ಮುಚ್ಚುವ ನಿರ್ಣಯವನ್ನು ಘೋಷಿಸಿದ್ದರು. ಇದಕ್ಕೂ ಮುಂಚೆ ಬಾರ್ ಮಾಲೀಕರ ಸಂಘದ ವಾದವನ್ನು ಆಲಿಸಿದ್ದ ಸುಪ್ರೀಂ ಕೋರ್ಟ್, ಸೆಪ್ಟಂಬರ್ 30ವರೆಗೆ ಈ ಆದೇಶವನ್ನು ತಡೆ ಹಿಡಿದು, ಮಧ್ಯ ಮಾರಾಟ ಮಾಡಲು ಪಂಚತಾರಾ ಹೋಟೆಲ್ ಗಳಿಗೆ ಮಾತ್ರ ಅವಕಾಶ ಕೊಟ್ಟಿರುವುದು ತರ್ಕಹೀನ ಎಂದಿತ್ತು.