Untitled Document
Sign Up | Login    
Dynamic website and Portals
  
October 29, 2014

ಕಪ್ಪುಹಣ ಖಾತೆದಾರರ 2ನೇಪಟ್ಟಿ ಸಲ್ಲಿಸಿದ ಕೇಂದ್ರ ಸರ್ಕಾರ

ನವದೆಹಲಿ : ವಿದೇಶದಲ್ಲಿ ಕಪ್ಪುಹಣ ಇಟ್ಟಿರುವ ಖಾತೆದಾರರ ಎರಡನೇ ಪಟ್ಟಿಯನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದು, 627 ಖಾತೆದರರ ಹೆಸರನ್ನು ಸಲ್ಲಿಕೆ ಮಾಡಿದೆ.

ಕಪ್ಪುಹಣ ಇಟ್ಟಿರುವ ಎಲ್ಲಾ ಖಾತೆದಾರರ ಹೆಸರನ್ನು ಒಂದು ದಿನದಲ್ಲಿ ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ 627 ಖಾತೆದಾರರ ಮಾಹಿತಿಯನ್ನು ಸಲ್ಲಿಕೆ ಮಾಡಿದೆ.

ಮೂರು ಸೆಟ್ ಗಳಲ್ಲಿ ಖಾತೆದಾರರ ಹೆಸರನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ಸಾಲಿಸಿಟರ್ ಜನರಲ್ ಮುಖುಲ್ ರೋಹಟ್ಗಿ, ಹೆಸರನ್ನು ಬಹಿರಂಗ ಪಡಿಸದಂತೆ ಮನವಿ ಮಾಡಿದ್ದಾರೆ.

ಮೊದಲ ಪಟ್ಟಿಯಲ್ಲಿ ವಿದೇಶಗಳ ನಡುವಿನ ಒಪ್ಪಂದದ ಬಗ್ಗೆ ವಿವರ, 2ನೇ ಪಟ್ಟಿಯಲ್ಲಿ 627 ಖಾತೆದಾರ ಮಾಹಿತಿ ಹಾಗೂ 3ನೇ ಪಟ್ಟಿಯಲ್ಲಿ ತನಿಖೆಯ ಪ್ರಗತಿಯ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಕಪ್ಪುಹಣ ಖಾತೆದಾರರ ಬಗ್ಗೆ ಯಾವುದೇ ಏಜನ್ಸಿ ಅಥವಾ ಸಂಸ್ಥೆಯಿಂದ ತನಿಖೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಯಾವುದನ್ನೂ ಮುಚ್ಚಿಡಲು ಬಯಸುತ್ತಿಲ್ಲ. ಆದರೆ ಖಾತೆದಾರ ಹೆಸರನ್ನು ಬಹಿರಂಗಪಡಿಸಬೇಡಿ ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.

ವಿದೇಶಗಳ ಜತೆ ಹಲವು ಒಪ್ಪಂದವನ್ನು ಮಾಡಿಕೊಳ್ಳಲಾಗಿದ್ದು, ಹೆಸರು ಬಹಿರಂಗಪಡಿಸಿದರೆ ಒಡಂಬಡಿಕೆ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಕೆಲವರ ಹೆಸರನ್ನು ಬಹಿರಂಗ ಮಾಡಲು ಸಾಧ್ಯವಾಗಲಿಲ್ಲ ಎಂದು ಕೇಂದ್ರ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದೆ.

ಅ.27ರಂದು ಕೇಂದ್ರ ಸರ್ಕಾರ ವಿದೇಶದಲ್ಲಿಟ್ಟಿರುವ ಕಪ್ಪುಹಣದ ಮೂವರು ಖಾತೆದಾರರ ಹೆಸರನ್ನು ಬಹಿರಂಗಪಡಿಸಿತ್ತು. ಕಪ್ಪುಹಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗೆ ಕೇಂದ್ರ ಸಲ್ಲಿಸಿದ ಅಫಿಡವಿಟ್ ನಲ್ಲಿ ಡಾಬರ್ ಸಮೂಹ ಸಂಸ್ಥೆಗಳ ನಿರ್ದೇಶಕ ಪ್ರದೀಪ್ ಬರ್ಮನ್, ಗೋವಾದ ಮೈನಿಂಗ್ ಕಂಪನಿ ಮುಖ್ಯಸ್ಥೆ ರಾಧಾ ಎಸ್ ಟಿಂಬ್ಲೋ ಹಾಗೂ ರಾಜ್ ಕೋಟ್ ಮೂಲದ ಚಿನ್ನದ ವ್ಯಾಪಾರಿ ಪಂಕಜ್ ಚಿಮನ್ ಲಾಲ್ ಹೆಸರುಗಳನ್ನು ಬಹಿರಂಗಪಡಿಸಲಾಗಿತ್ತು.

ಕಪ್ಪುಹಣ ಇಟ್ಟಿರುವ ಎಲ್ಲಾ ಖಾತೆದಾರರ ಹೆಸರನ್ನು ಒಂದುದಿನದಲ್ಲಿ ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ಅಲ್ಲದೇ ಕಪ್ಪುಹಣದ ಸಂಬಂಧ ಸರ್ಕಾರ ಈಗ ನಡೆಸುತ್ತಿರುವ ತನಿಖೆಯ ವೇಗ ಗಮನಿಸಿದರೆ ನಮ್ಮ ಅವಧಿಯನಲ್ಲಿ ಮುಗಿಯುವಂತೆ ಕಾಣುತ್ತಿಲ್ಲ, ಕಪ್ಪುಹಣ ಹೊಂದಿರುವವರ ರಕ್ಷಣೆಗೆ ನೀವೇಕೆ ಯತ್ನಿಸುತ್ತೀರಿ, ತನಿಖೆ ವಿಚಾರವನ್ನು ನಮಗೆ ಬಿಡಿ. ಎಲ್ಲಾ ಖಾತೆದಾರರ ಹೆಸರನ್ನು ಮುಚ್ಚಿದ ಲಕೋಟೆಯಲ್ಲಿ ನೀಡುವಂತೆ ಸೂಚನೆ ನೀಡಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited