ಇಸ್ಲಾಮಾಬಾದ್ : ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ ಐ ಪಾಕ್-ಅಪ್ಘಾನಿಸ್ತಾನದ ರಹಸ್ಯ ಸ್ಥಳಕ್ಕೆ ಸ್ಥಳಾಂತರ ಮಾಡಿದೆ.
ದಾವೂದ್ ಇಬ್ರಾಹಿಂ ಗೆ ಭಾರತ-ಅಮೆರಿಕ ಜಂಟಿಯಾಗಿ ಬಲೆ ಬೀಸುತ್ತಿರುವ ಬೆನ್ನಲ್ಲೇ ಪಾಕಿಸ್ತಾನದ ಐಎಸ್ ಐ, ಭದ್ರತೆಯೊಂದಿಗೆ ಆತನನ್ನು ಸ್ಥಳಾಂತರಮಾಡಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಭೇಟಿ ವೇಳೆ ಭಯೋತ್ಪಾದನೆ ದಮನ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಮೆರಿಕದ ತಮ್ಮ ಸಹವರ್ತಿ ಜತೆ ಮಾತನಾಡಿದ್ದರು. ಅಲ್ಲದೇ ದಾವೂದ್ ಬಗ್ಗೆ ಭಾರತೀಯ ಸಂಸ್ಥೆಗಳು ನಿರಂತರ ಶೋಧ ನಡೆಸುತ್ತಿದ್ದಾರೆ ಎಂಬ ಬಗ್ಗೆ ಪಾಕಿಸ್ತಾನಕ್ಕೆ ಸಂಶಯಗಳಿದ್ದ ಹಿನ್ನಲೆಯಲ್ಲಿ ಆತನನ್ನು ಸ್ಥಳಾಂತರಿಸಲಾಗಿದೆ ಎನ್ನಲಾಗುತ್ತಿದೆ.