ನವದೆಹಲಿ : 'ಕೊಚ್ಚಿ' ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ನಾಗರಿಕ ವಿಮಾನಯಾನ ಭಧ್ರತಾ ದಳ ಉನ್ನತ ಮಟ್ಟದ ಸಭೆ ನಡೆಸಿದೆ.
ಏರ್ ಇಂಡಿಯಾ ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಎಲ್ಲ ವಿಮಾನನಿಲ್ದಾಣಗಳಿಗೆ 'ಗರಿಷ್ಠ ಎಚ್ಚರಿಕೆ' ಸೂಚನೆಯನ್ನು ನೀಡಲಾಗಿದೆ ಆದರೆ ನಿರ್ಧಿಷ್ಟ ದಾಳಿಯ ಸೂಚನೆಯನ್ನು ಯಾವುದೆ ವಿಮಾನ ನಿಲ್ದಾಣಕ್ಕೆ ನೀಡಿಲ್ಲ ಎಂದು ನಾಗರಿಕ ವಿಮಾನಯಾನ ಭಧ್ರತಾ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಎಲ್ಲ ವಿಮಾನನಿಲ್ದಾಣ ವಿಭಾಗಗಳಿಗೂ ಅತಿ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಎಲ್ಲ ವಿಮಾನಗಳನ್ನು ಅದರಲ್ಲೂ ಅಹಮದಾಬಾದ್, ಮುಂಬೈ ಮತ್ತು ಕೊಚ್ಚಿಯಲ್ಲಿ ವಿಶೇಷವಾಗಿ ತಪಾಸಣೆ ಮಾಡಲಾಗುತ್ತಿದೆ. ಹೈಜಾಕಿಂಗ್ ವಿರೋಧಿ ಬಣವನ್ನು ಎಚ್ಚರದಲ್ಲಿಟ್ಟಿದ್ದೇವೆ, ಸಿ.ಐ.ಎಸ್.ಎಫ್ ಕಮಾಂಡೋಗಳು ವಿಶೇಷ ತಪಾಸಣೆ ಮಾಡುತ್ತಿದ್ದಾರೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಚ್ಚಿ, ಅಹಮದಾಬಾದ್ ಮತ್ತು ಮುಂಬೈಗಳಲ್ಲಿ ಎಲ್ಲ ತಪಾಸನೆಗಳನ್ನು ಎರೆಡರಡು ಬಾರಿ ಮಾಡಲಾಗುತ್ತಿದೆ ಎಂದೂ ತಿಳಿಸಿದ್ದಾರೆ.