ಬೆಂಗಳೂರು : ಕರ್ನಾಟಕದ 12 ನಗರಗಳ ಹೆಸರನ್ನು ಬದಲಾಯಿಸುವ ರಾಜ್ಯ ಸರ್ಕಾರದ 8 ವರ್ಷಗಳ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಈ ಹಿನ್ನಲೆಯಲ್ಲಿ ಇನ್ನುಮುಂದೆ ಬ್ಯಾಂಗಲೋರ್, ಬೆಳಗಾಂವ, ಮ್ಯಾಂಗಲೋರ್, ಬೆಲ್ಲಾರಿ, ಬಿಜಾಪುರ, ಚಿಕ್ಕಮಗಲೂರ್, ಗುಲ್ಬರ್ಗಾ, ಮೈಸೂರ್, ಹೊಸಪೇಟ್, ಶಿಮೊಗ, ತುಮಕೂರ್ ಮತ್ತು ಹುಬ್ಳಿ ನಗರಗಳ ಹೆಸರು ಸಂಪೂರ್ಣ ಕನ್ನಡೀಕರಣಗೊಳ್ಳಲಿವೆ.
ಕನ್ನಡ ಭಾಷೆಯ ಉಚ್ಛಾರಣೆಗೆ ತಕ್ಕಂತೆ ಹೊದಿಕೊಳ್ಳುವಂತೆ ನಗರಗಳ ಹೆಸರನ್ನು ಬದಲಾಯಿಸುವ ಬಗ್ಗೆ ರಾಜ್ಯದ ಸುವರ್ಣ ಮಹೋತ್ಸವದ ಆಚರಣೆ ವೇಳೆ 2006, ಅ.27ರಂದು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಹಲವಾರು ಕಾರಣಗಳಿಂದ ಈ ವರೆಗೆ ಅನುಮತಿಸಿಕ್ಕಿರಲಿಲ್ಲ.
ಈಗ ಕರ್ನಾಟಕದ ಪ್ರಸ್ತಾಪಕ್ಕೆ ಭಾರತೀಯ ಸರ್ವೇಕ್ಷಣ ಇಲಾಖೆ, ಭಾರತೀಯ ರೈಲ್ವೆ, ಅಂಚೆ ಇಲಾಖೆ, ವಿಜ್ನಾನ ಮತ್ತು ತಂತ್ರಜ್ನಾನ ಸಚಿವಾಲಯ, ಗುಪ್ತಚರದಳಗಳು ತಮ್ಮ ನಿರಪೇಕ್ಷಣಾ ಪತ್ರಗಳನ್ನು ನೀಡಿದ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ತನ್ನ ಅನುಮೋದನೆ ನೀಡಿದೆ.
ಈ ಊರುಗಳ ಹೆಸರು ಬದಲಾವಣೆಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಿ ದಾಖಲೆಗಳಲ್ಲಿ ಇವುಗಳ ಇಂಗ್ಲೀಷ್ ಸ್ಪೆಲ್ಲಿಂಗ್ ಬದಲಾಗಲಿವೆ. ಅಲ್ಲದೇ ಕನ್ನಡದಲ್ಲಿ ಈ ಊರುಗಳ ಹೆಸರು ಬಳಸುವಾಗಲು ಬದಲಾದ ಹೆಸರುಗಳನ್ನೇ ದಾಖಲೆಗಳಲ್ಲಿ ನಮೂದಿಸಬೇಕಾಗುತ್ತದೆ.