ಮುಂಬೈ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎನ್ ಸಿಪಿ 10 ಸ್ಥಾನಗಳನ್ನೂ ಗೆಲ್ಲುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ನುಡಿದಿದ್ದಾರೆ.
ಪಂಡರಾಪುರ ಹಾಗೂ ತುಳಜಾಪುರಗಳಲ್ಲಿ ಬಿಜೆಪಿ ರ್ಯಾಲಿಯಲಿ ಮಾತನಾಡಿದ ಅವರು, ಎನ್ ಸಿಪಿಯ ಗಡಿಯಾರ ಚಿಹ್ನೆಯಲ್ಲಿನ ಸಮಯ 10:10 ಅಂತೆಯೇ ಅವರಿಗೆ ಬರುವ ಸ್ಥಾನವೂ 10 ಎಂದು ಲೇವಡಿ ಮಾಡಿದರು.
ಅಂತೆಯೇ ಎನ್ ಸಿಪಿ ತನ್ನ 10 ವರ್ಷದ ಅವಧಿಯಲ್ಲಿ 10 ಪಟ್ಟು ಭ್ರಷ್ಟಾಚಾರ ನಡೆಸಿದೆ ಎಂದು ಮತ್ತೊಮ್ಮೆ ಅಧಿಕಾರ ನೀಡಿದರೆ 15 ಪಟ್ಟು ಭ್ರಷ್ಟಾಚಾರ ಹೆಚ್ಚಲಿದೆ. ಎನ್ ಸಿಪಿ ಎಂದರೆ ನ್ಯಾಚುರಲಿ ಕರಪ್ಟ್ ಪಾರ್ಟಿ ಎಂದು ವ್ಯಂಗ್ಯಮಾಡಿದ್ದಾರೆ.
ಆಭರಣ ಪೆಟ್ಟಿಗೆಗಳ ಮೇಲೆ ಗಮನವಿಟ್ಟಿದ್ದೇನೆ ಯಾವುದೇ ಹಸ್ತವನ್ನು ಖಜಾನೆಗೆ ಕೈಹಾಕಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.