ಕಾಶ್ಮೀರ : ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕ್ ಸೇನೆ ಪುಂಡಾಟ ಮುಂದುವರೆದಿದ್ದು, ಭಾರತೀಯ ಸೇನಾ ಶಿಬಿರಗಳನ್ನು, ನಾಗರಿಕರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದೆ. ಭಾರತೀಯ ಸೇನೆ ಕೂಡ ಪ್ರತ್ಯುತ್ತರ ನೀಡುತ್ತಿದ್ದು, ಗಡಿಯಲ್ಲಿ ಅಘೋಷಿತ ಕದನದ ವಾತಾವರಣ ನಿರ್ಮಾಣವಾಗಿದೆ.
70 ಭಾರತೀಯ ಸೇನಾ ಶಿಬಿರ ಹಾಗೂ 80 ಹಳ್ಳಿಗಳನ್ನು ಗುರಿಯಾಗಿಸಿಕೊಂಡು ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಬುಧವಾರ ನಡೆದ ಪಾಕ್ ದಾಳಿಗೆ ಮೃತಪಟ್ಟಿದ್ದು, 3 ಬಿಎಸ್ ಎಫ್ ಯೋಧರು ಸೇರಿದಂತೆ 12 ಜನರು ಗಾಯಗೊಂಡಿದ್ದಾರೆ.
ಈ ನಡುವೆ ಭಾರತೀಯ ಸೇನೆ ಪಾಕಿಸ್ತಾನಕ್ಕೆ ದಿಟ್ಟ ಪ್ರತ್ಯುತ್ತರ ನೀಡಿದ್ದು, ಪಾಕಿಸ್ತಾನದ 60 ಸೇನಾ ನೆಲೆಗಳ ಮೇಲೆ ಬಿಎಸ್ ಎಫ್ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ಪಾಕ್ ಗೆ ಪ್ರತ್ಯುತ್ತರ ನೀಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ಬಿಎಸ್ ಎಫ್ ಯೋಧರು ಪ್ರತಿ ದಾಳಿ ನಡೆಸಿದ್ದಾರೆ.
ಪಾಕ್ ದಾಳಿ ನಿಲ್ಲುವವರೆಗೂ ನ್ಬಾವು ಪ್ರತಿ ದಾಳಿ ನಿಲ್ಲಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಪ್ರಧಾನಿ ಮೋದಿ&id=15848'>ನರೇಂದ್ರ ಮೋದಿಯವರು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದು, ಗಡಿಯಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ ಬಿಎಸ್ ಎಫ್ ಯೋಧರು ಪಾಕ್ ಗೆ ನೀಡುತ್ತಿರುವ ದಿಟ್ಟ ಪ್ರತ್ಯುತ್ತರದ ಬಗ್ಗೆ ನಮಗೆ ತೃಪ್ತಿಯಿದೆ ಎಂದಿದ್ದಾರೆ.
ಅ.1ರಿಂದ ಈ ವರೆಗೆ 24ಕ್ಕೂ ಹೆಚ್ಚು ಬಾರಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ರಾತ್ರಿಯಿಂದ ನಡೆಸುತ್ತಿರುವ ಪಾಕ್ ಗುಂಡಿನ ದಾಳಿ ಮುಂಜಾನೆಯೂ ಮುಂದುವರೆದಿದೆ.
ಈನಡುವೆ ಶಾಂತಿಯ ಪಾಠ ಅರ್ಥವಾಗದವರಿಗೆ ಗುಂಡಿನ ಮೂಲಕವೇ ಪಾಠ ಕಲಿಸಬೇಕು. ಕದನ ವಿರಾಮ ಉಲ್ಲಂಘನೆ ನಿಲುವವರೆಗೂ ಪಾಕ್ ಜತೆ ಮಾತುಕತೆ ನಡೆಸಬೇಡಿ ಎಂದು ರಾಷ್ಟ್ರೀಯ ಭರದ್ರತಾ ಸಲಹೆಗಾರ ಅಜಿತ್ ದೋವಲ್ ಸೇನೆಗೆ ತಿಳಿಸಿದ್ದಾರೆ.