ಬೆಂಗಳೂರು : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಆರಂಭವಾಗಿದೆ. ಜಯಲಲಿತಾ ಅವರಿಗೆ ಜಾಮೀನು ನೀಡುವಂತೆ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಮನವಿ ಮಾಡಿದ್ದಾರೆ.
ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅವರಿರುವ ಪೀಠದ ಎದುರು ಮನವಿ&id=15824'>ಮೇಲ್ಮನವಿ ವಿಚಾರಣೆ ನಡೆಯುತ್ತಿದ್ದು, ಜಯಲಲಿತಾ ಮನವಿ&id=15824'>ಮೇಲ್ಮನವಿ ಅರ್ಜಿ ವಿಚಾರಣೆ ವಿಳಂಬವಾದರೆ ಅವರಿಗೆ ಜಾಮೀನು ನೀಡಬೇಕು ಎಂದು ಜಯಲಲಿತಾ ಪರ ವಕೀಲ ರಾಮ್ ಜೇಠ್ಮಲಾನಿ ವಾದ ಮಂಡಿಸಿದ್ದಾರೆ.
ಜಯಲಲಿತಾ ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 18 ವರ್ಷಗಳಿಂದ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಮನವಿ&id=15824'>ಮೇಲ್ಮನವಿ ಅರ್ಜಿ ವಿಚಾರಣೆ ಶೀಘ್ರದಲ್ಲಿ ನಡೆಯಲು ಸಾಧ್ಯವಿಲ್ಲ. ವಿಚಾರಣೆ ವಿಳಂಬವಾಗುವುದರಿಂದ ಜಯಲಲಿತಾ ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಅಲ್ಲದೇ ಮನವಿ&id=15824'>ಮೇಲ್ಮನವಿ ಅರ್ಜಿ ಶೀಘ್ರ ವಿಚಾರಣೆಯಾಗಬೇಕು. ಇಲ್ಲವಾದಲ್ಲಿ ಅಪರಾಧಿಯನ್ನು ಜೈಲಿನಲ್ಲಿಡಬಾರದು ಎಂದು ಸುಪ್ರೀಕೋರ್ಟ್ ಹೇಳಿದೆ. ಈ ಬಗ್ಗೆ ಕಾನೂನುನಿನಲ್ಲಿಯೂ ಸ್ಪಷ್ಟನೆಯಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪಿನ ಹಲವು ಹೇಳಿಕೆಗಳನ್ನು ರಾಮ್ ಜೇಠ್ಮಲಾನಿ ನ್ಯಾಯಾಲಯದಲ್ಲಿ ಉಲ್ಲೇಖ ಮಾಡಿದ್ದಾರೆ.
ನನ್ನ ಕಕ್ಷೀದಾರರು ನಿರಪರಾಧಿ ಎಂಬ ವಿಶ್ವಾಸವಿದೆ. ಜಯಲಲಿತಾ ಅವರಿಗೆ ಜಾಮೀನು ನೀಡಿದರೆ ನಾಪತ್ತೆಯಾಗುವುದಿಲ್ಲ, ವಿಚಾರಣೆಗೆ ಯಾವುದೇ ತೊಂದರೆಯೂ ಆಗುವುದಿಲ್ಲ, ನಾವು ತೀರ್ಪಿಗೆ ತಡೆ ನೀಡಿ ಎಂದು ಹೇಳುತ್ತಿಲ್ಲ, ಸಧ್ಯಕ್ಕೆ ಜಾಮೀನು ನೀಡಿ ಎಂದು ವಾದ ಮಂಡಿಸಿದ್ದಾರೆ.
ವಿಶೇಷ ಕೋರ್ಟ್ ನಿಂದ ಜಯಲಲಿತಾ ವಿರುದ್ಧದ ಸಾಕ್ಷಿದಾರರ ವಿಶ್ಲೇಷಣೆಯಾಗಿದೆ. 1971ರಲ್ಲಿ ಜಯಲಲಿತಾ ಪಿತ್ರಾರ್ಜಿತವಾಗಿ ಒಡವೆ ಹಾಗೂ ಆಸ್ತಿಯನ್ನು ಪಡೆದುಕೊಂಡಿದ್ದಾರೆ. ಇದನ್ನು ವಿಶೇಶ ನ್ಯಾಯಾಲಯ ಪರಿಗಣಿಸಿಲ್ಲ. ಅಲ್ಲದೇ ಜಯಲಲಿತಾ ಮನೆ ನಿರ್ಮಾಣದ ವಿಚಾರದ ಬಗ್ಗೆಯೂ ನ್ಯಾಯಾಲಯ ಸೂಕ್ತವಾಗಿ ನಡೆದುಕೊಂಡಿಲ್ಲ, ಪೊಲೀಸರು ಹೇಳಿದ್ದನ್ನು ಮಾತ್ರ ಒಪ್ಪಿಕೊಂಡಿದ್ದು, ಈ ಬಗ್ಗೆ ಪರಿಶೀಲನೆಯನ್ನೂ ನಡೆಸಿಲ್ಲ, ಸಾಕ್ಷಾಧಾರ ಕಾಯ್ದೆಯಂತೆ ವಿಶೇಷ ಕೋರ್ಟ್ ನಡೆದುಕೊಂಡಿಲ್ಲ ಎಂದು ವಾದ ಮಂಡಿಸಿದರು. ಈ ಮೂಲಕ ವಿಶೇಷ ನ್ಯಾಯಾಲಯದ ತೀರ್ಪಿನ ಲೋಪವನ್ನು ಎತ್ತಿಹಿಡಿಯುವ ಯತ್ನವನ್ನು ಜೇಠ್ಮಲಾನಿ ಮಾಡಿದ್ದಾರೆ. ಈಗಾಗಲೇ ಜಯಲಲಿತಾ ಪರ ವಕಿಲರ ವದ ಮಂಡನೆ ಮುಕ್ತಾಯವಾಗಿದೆ.