ನವದೆಹಲಿ : ಗಾಂಧಿ ಜಯಂತಿ ಅಂಗವಾಗಿ ಅತ್ತ ಪ್ರಧಾನಿ ನರೇಂದ್ರ ಮೋದಿ, ಸ್ವಚ್ಛ ಭಾರತ್ ಅಭಿಯಾನಕ್ಕೆ ಚಾಲನೆ ನೀಡಿದ್ದರೆ ಇತ್ತ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪ್ರಧಾನಿ ನಿವಾಸದ ಬಳಿಯೇ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ದೆಹಲಿಯಲ್ಲಿ ಪ್ರತ್ಯೇಕವಾಗಿ ಸ್ವಚ್ಛತಾ ಅಭಿಯಾನವನ್ನು ಕೈಗೊಂಡಿರುವ ದೆಹಲಿ ಮಾಜಿ ಸಿ.ಎಂ, ಪ್ರಧಾನಿಯವರ ನಿವಾಸದ ಬಳಿ ರಸ್ತೆ ಗುಡಿಸಿ ಸ್ವಚ್ಛ ಮಾಡಿದ್ದಾರೆ.
ನಂತರ ಆಪ್ ಪಕ್ಷದ ಶಾಸಕರೊಂದಿಗೆ ಬಿ.ಆರ್ ಕ್ಯಾಂಪ್ ನತ್ತ ತೆರಳಿದ ಕೇಜ್ರಿವಾಲ್, ಪೌರ ಕಾರ್ಮಿಕರೊಂದಿಗೆ ಸ್ವಚ್ಛತೆ ಕಾರ್ಯದಲ್ಲಿ ಭಾಗಿಯಾಗಿದ್ದರು.
ಈ ಅಭಿಯಾನದಲ್ಲಿ ಭಾಗವಹಿಸುವಂತೆ ಆಮ್ ಆದ್ಮಿ ಪಕ್ಷ ದೆಹಲಿ ಜನತೆಗೆ ಕರೆ ನೀಡಿದ್ದು, ಪೌರ ಕಾರ್ಮಿಕರು ಅನುಭವಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸಲು ಎ.ಎ.ಪಿ ನಿರ್ಧಾರ ಕೈಗೊಂಡಿದೆ.