Gandhinagar : ದೇಶದ ಮೂಂಚೂಣಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಒಂದಾಗಿರುವ ಕಾರ್ಪೊರೇಷನ್ ಬ್ಯಾಂಕ್ ತನ್ನ ಗ್ರಾಹಕರಿಗೆ ಉತ್ತಮ ಸೇವೆ ಮತ್ತು ವಿಶಿಷ್ಠ ಯೋಜನೆಗಳನ್ನು ನೀಡುವುದರೊಂದಿಗೆ, ವಿವಿಧ ಸಮಾಜ ಸೇವಾ ಕಾರ್ಯಗಳಲ್ಲೂ ಸಕ್ರೀಯವಾಗಿ ತೊಡಗಿಕೊಂಡಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಎಸ್.ಆರ್. ಬನ್ಸಾಲ್ ಹೇಳಿದರು.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿನ ಖನಿಜ ಭವನದಲ್ಲಿ ಬ್ಯಾಂಕ್ ನ ನೂತನ ಶಾಖೆ ಮತ್ತು ಇ-ಲಾಬಿ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಧನ್ ಯೋಜನೆ ಸೇರಿದಂತೆ 'ಸ್ವಚ್ಛ ಭಾರತ ಅಭಿಯಾನ'ದಲ್ಲಿ ಕಾರ್ಪೊರೇಷನ್ ಬ್ಯಾಂಕ್ ತನ್ನನ್ನು ತೊಡಗಿಸಿಕೊಂಡಿದೆ ಎಂದರಲ್ಲದೆ, 'ಸ್ವಚ್ಛ ಭಾರತ' ಅಭಿಯಾನಕ್ಕೆ ಪ್ರತಿಯಾಗಿ ಬ್ಯಾಂಕ್ 'ಸ್ವಚ್ಛ ವಿದ್ಯಾಲಯ ಯೋಜನೆ'ಯನ್ನು ಹಮ್ಮಿಕೊಂಡಿದೆ ಎಂದರು.
'ಸ್ವಚ್ಛ ವಿದ್ಯಾಲಯ ಯೋಜನೆ' ಅಡಿಯಲ್ಲಿ ಬ್ಯಾಂಕ್ ಶೌಚಾಲಯ ವಂಚಿತ 100 ಶಾಲೆಗಳನ್ನು ಗುರುತಿಸಲಿದ್ದು ಈ ಶಾಲೆಗಳಿಗೆ ಶೌಚಾಲಯಗಳನ್ನು ಕಟ್ಟಿಸಿಕೊಡಲಿದೆ ಎಂದು ಪ್ರಕಟಿಸಿದರು. ಕಾರ್ಪೊರೇಷನ್ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಹೊಂದಿರುವ ವಿವಿಧ ಸವಲತ್ತುಗಳ ಬಗ್ಗೆ ವಿವರಣೆ ನೀಡಿದ ಅವರು, ಶೂನ್ಯ ಬ್ಯಾಲೆನ್ಸ್ ಖಾತೆಗಳೂ ಸೇರಿದಂತೆ ಎಲ್ಲ ಖಾತೆದಾರರಿಗೆ ಐದು ಲಕ್ಷ ರೂಪಾಯಿಗಳ ವಿಮೆ ನೀಡುತ್ತಿರುವ ಏಕೈಕ ಬ್ಯಾಂಕ್ ಕಾಯಾಂಕ್ ಎಂದು ನುಡಿದರು.
ಬ್ಯಾಂಕ್ ಪರಿಸರ ಸ್ನೇಹಿ ಕಾರ್ಯಗಳನ್ನೂ ತನ್ನನ್ನು ತೊಡಗಿಸಿಕೊಂಡಿದ್ದು, ಗಿಡ ನೆಡುವ ಆಂದೋಲನ, ಯುವಕರಿಗೆ ತರಬೇತಿ, ಯುವ ಶಿಕ್ಷಣ ಸೇರಿದಂತೆ ಹಲವು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಕಾರ್ಪೊರೇಷನ್ ಬ್ಯಾಂಕ್ ತನ್ನನ್ನು ತೊಡಗಿಸಿಕೊಂಡಿದೆ.
ಇದಕ್ಕೂ ಮುನ್ನ ನಡೆದ ಸಮಾರಂಭದಲ್ಲಿ ರಾಜ್ಯ ಸರ್ಕಾರದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಕೆ. ರತ್ನಪ್ರಭಾ ಅವರು ನೂತನ ಶಾಖೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಹಿರಿಯ ಐಎಎಸ್ ಅಧಿಕಾರಿ ಮತ್ತು ಕನರ್ಾಟಕ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ವಿ.ಪಿ. ಬಳಿಗಾರ್ ಅವರು ಬ್ಯಾಂಕಿನ 24/7 ಇ-ಲಾಬಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಹಿರಿಯ ಐಎಎಸ್ ಅಧಿಕಾರಿಗಳಾದ ಮಹೇಶ್ವರ್ ರಾವ್, ತುಷಾರ್ ಗಿರಿನಾಥ್, ಕಾಪರ್ೂ ರೇಷನ್ ಬ್ಯಾಂಕಿನ ವೃತ್ತ ಕಚೇರಿ ಕಾರ್ಯಕಾರಿ ವ್ಯವಸ್ಥಾಪಕ ಫರೀದ್ ಅಹ್ಮದ್, ವೃತ್ತ ಕಚೇರಿಯ ಉಪ ಕಾರ್ಯಕಾರಿ ವ್ಯವಸ್ಥಾಪಕ ಡಿ. ಎಂ. ಮಜೂಂಮ್ದಾರ್ ಮತ್ತಿತರರು ಉಪಸ್ಥಿತರಿದ್ದರು.