ನವದೆಹಲಿ : ಪೊಲೀಸರು ನಡೆಸುವ ಎನ್ ಕೌಂಟರ್ ಬಗ್ಗೆ ಸುಪ್ರೀಂ ಕೋರ್ಟ್ ಹೊಸ ಮಾರ್ಗಸೂಚಿ ನೀಡಿದೆ. ಎನ್ ಕೌಂಟರ್ ಬಗ್ಗೆ ತನಿಖೆ ಕಡ್ಡಾಯ ಎಂದು ನ್ಯಾಯಾಲಯ ಪೊಲೀಸ್ ಇಲಾಖೆಗೆ ನೀಡಿದ ಗೈಡ್ ಲೈನ್ ನಲ್ಲಿ ತಿಳಿಸಿದೆ.
ಎನ್ ಕೌಂಟರ್ ನಡೆಸುವ ಅಪರಾಧಿಗಳ ಬಗ್ಗೆ ಮೊದಲೇ ಮಾಹಿತಿ ನೀಡಬೇಕು. ಬರವಣಿಗೆ ಅಥವಾ ವಿದ್ಯುನ್ಮಾನ ರೂಪದಲ್ಲಿ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಎನ್ ಕೌಂಟರ್ ಸ್ವತಂತ್ರ ತನಿಖೆಯನ್ನು ರಾಜ್ಯ ಸಿಐಡಿ, ಪ್ರತ್ಯೇಕ ಪೊಲೀಸ್ ತಂಡಗಳು ನಡೆಸಬೇಕು. ಸಿಆರ್ ಪಿಸಿ ಸೆಕ್ಷನ್ 176ರಡಿ ಮೆಜಿಸ್ಟ್ರೇರಿಯಲ್ ತನಿಖೆ ನಡೆಸಬೇಕು ಎಂದು ಹೇಳಿದೆ.
ಎನ್ ಕೌಂಟರ್ ನಲ್ಲಿ ಭಾಗಿಯಾಗಿರುವ ಪೊಲೀಸರಿಗೆ ತಕ್ಷಣಕ್ಕೆ ಯಾವುದೇ ಬಡ್ತಿ, ಪ್ರಶಸ್ತಿ ನೀಡುವಂತಿಲ್ಲ. ಪ್ರಕರಣದ ಬಗ್ಗೆ ಸತ್ಯಾಸತ್ಯತೆ ಅರಿತು ಆಯಾ ರಾಜ್ಯ ಸರ್ಕಾರಗಳು ಈ ಬಗ್ಗೆ ನಿರ್ಧರಿಸಬೇಕು ಎಂದು ಸೂಚಿಸಿದೆ.