ಬೆಂಗಳೂರು : ಪ್ರತ್ಯೇಕ ರಾಜ್ಯದ ಹೇಳಿಕೆಯನ್ನು ಮೂಲೆಗೆ ತಳ್ಳಬೇಕು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಮಾಡಬೇಕು ಎಂಬುದು ಸರಿಯಲ್ಲ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಡಿದ ಅವರು, ಅಖಂಡ ಕರ್ನಾಟಕ ಎಂಬುದು ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರ ಕನಸು. ಅದು ನಮ್ಮ ಕನಸುಕೂಡ ಹೌದು. ಪ್ರತ್ಯೇಕತೆಯ ಕೂಗಿಗೆ ಯಾವುದೇ ಬೆಲೆಕೊಡದೇ ಅಂತಹ ಹೇಳಿಕೆಯನ್ನು ಮೂಲೆಗೆ ತಳ್ಳಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಯಾವುದೇ ರಾಜ್ಯಗಳ ಮೇಲೆ ಬಲವಂತವಾಗಿ ಹಿಂದಿ ಭಷೆಯನ್ನು ಹೇರುತ್ತಿಲ್ಲ, ಆಯಾ ರಾಜ್ಯದ ಸ್ಥಳೀಯ ಭಾಷೆಗಳಿಗೆ ಪ್ರಾದಾನ್ಯತೆ ನೀಡಲಾಗುತ್ತದೆ. ಆದರೆ ಹಿಂದಿ ಭಾಷೇಗೆ ಆಧ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಕೇಂದ್ರ ಸರ್ಕರ ಮಾತೃ ಭಾಷೆಗಳನ್ನು ಕಡೆಗಣಿಸುತ್ತಿಲ್ಲ, ಯಾವುದೇ ರಾಜ್ಯದ ಮೇಲೂ ಬಲವಂತವಾಗಿ ಹಿಂದಿ ಕಲಿಯಬೇಕೆಂದು ಒತ್ತಡವನ್ನೂ ಹಾಕುತ್ತಿಲ್ಲ. ಎಲ್ಲಾ ರಜ್ಯಗಳ ಭಾಷೆಗೂ ಸರ್ಕಾರ ಆದ್ಯತೆ ನೀಡುತ್ತದೆ ಎಂದರು.