ಬೆಂಗಳೂರು : ನಿತ್ಯಾನಂದ ರಾಸಲೀಲೆ ಪ್ರಕರಣ ಹಾಗೂ ಲೈಗಿಂಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯಾನಂದ ಪುರುಷತ್ವ ಪರೀಕ್ಷೆ ಆರಂಭವಾಗಿದೆ.
ಸುಪ್ರೀಂ ಕೋರ್ಟ್ ಸೆ.3ರಂದು ನಿತ್ಯಾನಂದನ ಪುರುಷತ್ವ ಪರೀಕ್ಷೆಗೆ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ನಿತ್ಯಾನಂದನ ಪುರುಷ್ತ್ವ ಪರೀಕ್ಷೆ ಆರಂಭವಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯ ಅಧೀಕ್ಷಕ ಡಾ.ದುರ್ಗಣ್ಣ ನೇತೃತ್ವದಲ್ಲಿ ನೆಫ್ರೋ ಯುರಾಲಜಿ ಸಂಸ್ಥೆಯ ಡಾ.ರಟ್ಕರ್ ಅವರ ಮಾರ್ಗದರ್ಶನದಲ್ಲಿ ತಜ್ನ ವೈದ್ಯರುಗಳಾದ ಡಾ.ರಾಮಲಿಂಗಯ್ಯ, ಡಾ.ಸುಜಾತಾ ಸಿದ್ದಪ್ಪ ಹಾಗೂ ಡಾ.ಸಿ.ಆರ್.ಚದ್ರಶೇಖರ್ ಹಾಗೂ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರುಗಳಾದ ಡಾ.ವೀರಣ್ಣ ಗೌಡ, ಡಾ.ವೆಂಕಟೇಶ್ ಸೇರಿದಂತೆ ಒಟ್ಟು 6 ತಜ್ನ ವೈದ್ಯರ ತಂಡದಿಂದ ಪುರುಷತ್ವ ಪರೀಕ್ಷೆ ನಡೆಯುತ್ತಿದೆ.
ಪುರುಷತ್ವ ಪರೀಕ್ಷೆ ಬಳಿಕ ಬೆಳಿಗ್ಗೆ 11.30ಕ್ಕೆ ವಿಧಿ ವಿಜ್ನಾನ ತಜ್ನರುಗಳಿಂದ ನಿತ್ಯಾನಂದನ ಧ್ವನಿ ಪರೀಕ್ಷೆ ನಡೆಸಲಿದ್ದಾರೆ. ಧ್ವನಿ ಪಕ್ಷೆ ಎರಡು ಗಂಟೆಗಳ ಕಾಲ ನಡೆಯಲಿದೆ.
ರಾಸಲೀಲೆ ಪ್ರಕರಣಕ್ಕೆ ಸಂಬಮ್ಧಿಸಿದಂತೆ ಆಸ್ಪತ್ರೆಗೆ ಬರುವಂತೆ ಸಿ.ಐಡಿ ಡಿವೈ ಎಸ್ ಪಿ ಲೋಕೇಶ್ ನಿತ್ಯಾನಂದನಿಗೆ ನೋಟಿಸ್ ನೀಡಿದ್ದರು.
ನಿತ್ಯಾನಂದನ ಪುರುಷತ್ವ ಪರೀಕ್ಷೆ ಹಿನ್ನಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ಸುತ್ತಮುತ್ತ ಬಿಗಿ ಪೊಲೀಸ್ ಭ್ರದ್ರತೆ ಕೈಗೊಳ್ಳಲಾಗಿದೆ.