ತಿರುವನಂತಪುರಂ : ಕೇರಳದ 23ನೇ ರಾಜ್ಯಪಾಲರಾಗಿ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾ.ಸದಾಶಿವಂ ಪದಗ್ರಹಣ ಮಾಡಿದ್ದಾರೆ.
ಶೀಲಾ ದೀಕ್ಷಿತ್ ರಿಂದ ತೆರವಾದ ರಾಜ್ಯಪಾಲರ ಸ್ಥಾನಕ್ಕೆ ಸದಾಶಿವಂ ನೇಮಕಗೊಂಡಿದ್ದು, ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಶೋಕ್ ಭೂಷಣ್ ಪ್ರಮಾಣ ವಚನ ಬೋಧಿಸಿದರು.
ಮುಖ್ಯಮಂತ್ರಿ ಒಮನ್ ಚಾಂಡಿ, ರಾಜ್ಯ ಸಭೆ ಉಪ ಸಭಾಪತಿ ಪಿ.ಜೆ ಕುರಿಯನ್, ವಿಧಾನಸಭೆ ಸ್ಪೀಕರ್ ಕಾರ್ತಿಕೇಯನ್ ಹಾಗೂ ಹಲವು ಸಚಿವರು ಭಾಗಿಯಾಗಿದ್ದರು.
1949, ಏ.27ರಂದು ಜನಿಸಿದ ಸದಾಶಿವಂ, 2013 ಜುಲೈನಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದರು. 2014 ಏಪ್ರಿಲ್ ನಲ್ಲಿ ಸದಾಶಿವಂ ನಿವೃತ್ತರಾಗಿದ್ದರು. ಸೆ.3ರಂದು ಪ್ರಧಾನಿ ನರೇಂದ್ರ ಮೋದಿ ನೇತೃದ ಎನ್.ಡಿ.ಎ ಸರ್ಕಾರ ಸದಾಶಿವಂ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಕ ಮಾಡಿ ಅದೇಶ ಹೊರಡಿಸಿತ್ತು.