ನವದೆಹಲಿ : 'ಅಂತರ್ಜಾಲ ಸೇವೆ'ಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಮತ್ತೊಮ್ಮೆ ಸೂಚನೆ ನೀಡಿದ್ದಾರೆ.
ಸರ್ಕಾರಿ ಕಚೇರಿಗಳನ್ನು ಪೇಪರ್ ಮುಕ್ತ ಮಾಡಲು ಅಂತರ್ಜಾಲ ತಂತ್ರಜ್ನಾನವನ್ನು ಸಮರ್ಥವಾಗಿ ಬಳಸಿಕೊಳ್ಳಲು ಈ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ ನೌಕರರಿಗೆ ಸೂಚಿಸಿದ್ದರು. ಆದರೆ ಸರ್ಕಾರದ ಆದೇಶದ ಸರಿಯಾಗಿ ಪಾಲನೆಯಾಗಿಲ್ಲದ ಕಾರಣದಿಂದ ಪ್ರಧಾನಿ ಮತ್ತೊಮ್ಮೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಕಾಗದಗಳಿಗೆ ಖರ್ಚು ಮಾಡುವ ವೆಚ್ಚವನ್ನು ಕಡಿಮೆ ಮಾಡುವುದು, ಕಾಗದ ತಯಾರಿಕೆಗಾಗಿ ಕಡಿಯುವ ಲಕ್ಷಾಂತರ ಮರಗಳನ್ನು ಉಳಿಸುವ ಉದ್ದೇಶದಿಂದ ಇ-ಆಡಳಿತಕ್ಕೆ ಹೆಚ್ಚು ಒತ್ತು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಕಾಗದ ಬಳಕೆ ಕಡಿಮೆ ಮಾಡಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಒಂದು ವೇಳೆ ಪೇಪರ್ ದಾಖಲೆಗಳು ಅನಿವಾರ್ಯವಾದರೆ ಸಂಬಂಧಪಟ್ಟ ವಿಷಯವನ್ನು ಕಾಗದದ ಎರಡೂ ಭಾಗದಲ್ಲಿ ಟೈಪ್ ಮಾಡಬೇಕೆಂದು ಆದೇಶ ಹೊರಡಿಸಲಾಗಿದೆ.