ಟೋಕಿಯೋ : ಜಪಾನ್ ಹೂಡಿಕೆದಾರರಿಗೆ ಭಾರತಕ್ಕಿಂತಲೂ ಶಾಂತಿಯುತ ದೇಶ ಮತ್ತೊಂದಿಲ್ಲ, ಜಪಾನ್ ಹೂಡಿಕೆದಾರರಿಗೆ ಭಾರತದಲ್ಲಿ ರೆಡ್ ಟೇಪ್ ಬದಲು ರೆಡ್ ಕಾರ್ಪೆಟ್ ಸ್ವಾಗತ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
4ನೇ ದಿನದ ಜಪಾನ್ ಪ್ರವಾಸದಲ್ಲಿ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜಪಾನ್ ಹೂಡಿಕೆಗೆ ಭಾರತ ಸೂಕ್ತ ಸ್ಥಳ ಎಂದು ಮೋದಿ ತಿಳಿಸಿದ್ದಾರೆ. ಜಪಾನ್ ಹಾರ್ಡ್ ವೇರ್ ಕ್ಷೇತ್ರದಲ್ಲಿ ಮುಂದಿದೆ, ಭಾರತ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಪರಿಣಿತಿ ಪಡೆದಿದೆ. ಜಪಾನ್-ಭಾರತ ಜತೆಗೂಡಿದರೆ ಏಷ್ಯಾವನ್ನು ಅಭಿವೃದ್ಧಿಪಡಿಸಲು ಸಾಧ್ಯ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ಜಪಾನ್ ಜನತೆಯ ಕಾರ್ಯ ನೈತಿಕತೆ ಎತ್ತರದಲ್ಲಿದ್ದು ಭಾರತದ ಜನತೆಯೂ ಕಾರ್ಯ ನೈತಿಕತೆ ಬೆಳೆಸಿಕೊಳ್ಳಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಜಪಾನ್-ಭಾರತ ಶಾಂತಿ ಬಗ್ಗೆ ಚಿಂತಿಸಬೇಕಿದೆ. ಬೇರೆಯವರ ಬಗ್ಗೆ ಚಿಂತಿಸುವ ಬದಲು ನಮ್ಮ ಬಗ್ಗೆ ಚಿಂತಿಸಬೇಕಿದೆ ಎಂದು ಹೇಳಿದ್ದಾರೆ.
'ಮೇಕ್ ಇನ್ ಇಂಡಿಯಾ ನಮ್ಮ ಮಿಷನ್' ಎಂದಿರುವ ಪ್ರಧಾನಿ ನರೇಂದ್ರ ಮೋದಿ ಜಪಾನ್ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಲು ಆಹ್ವಾನ ನೀಡಿದ್ದಾರೆ.