ಬೆಂಗಳೂರು : 2011-12ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಆ.25ರಂದು ಪ್ರಕಟವಾಗಿದ್ದು ತಲ್ಲಣ ಪ್ರಥಮ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ದರ್ಶನ್ ಅತ್ಯುತ್ತಮ ನಟ, ನಿರ್ಮಲಾ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಿರಿಯ ಚಲನಚಿತ್ರ ನಿರ್ಮಾಪಕ ಕೆ.ಸಿ.ಎನ್ ಚಂದ್ರಶೇಖರ್ ನೇತೃತ್ವದ ಸಮಿತಿ, ಒಟ್ಟು 59 ಚಲನಚಿತ್ರಗಳನ್ನು ವೀಕ್ಷಿಸಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಪ್ರಶಸ್ತಿಗೆ ಭಾಜನರಾಗಿರುವ ಚಲನಚಿತ್ರ, ನಟ, ನಟಿಯರ ಪಟ್ಟಿಯನ್ನು ವಾರ್ತಾ ಸಚಿವರಾದ ರೋಷನ್ ಬೇಗ್ ಪ್ರಕಟಿಸಿದ್ದಾರೆ.
ಪ್ರಶಸ್ತಿ ವಿವರ:
ಪ್ರಥಮ ಅತ್ಯುತ್ತಮ ಚಿತ್ರ: ತಲ್ಲಣ
ದ್ವಿತೀಯ ಅತ್ಯುತ್ತಮ ಚಿತ್ರ: ಭಾರತ್ ಸ್ಟೋರ್ಸ್
ತೃತೀಯ ಅತ್ಯುತ್ತಮ ಚಿತ್ರ: ಎದೆಗಾರಿಕೆ
ಅತ್ಯುತ್ತಮ ನಟ: ದರ್ಶನ್
ಅತ್ಯುತ್ತಮ ನಟಿ: ನಿರ್ಮಲ ಚೆನ್ನಪ್ಪ
ಅತ್ಯುತ್ತಮ ಪೋಷಕ ನಟ: ಕರಿಸುಬ್ಬು
ಅತ್ಯುತ್ತಮ ಪೋಷಕ ನಟಿ: ಅರುಣಾ ಬಾಲರಾಜ್
ಅತ್ಯುತ್ತಮ ಸಂಗೀತ ನಿರ್ದೇಶಕ: ಅರ್ಜುನ್ ಜನ್ಯ
ಅತ್ಯುತ್ತಮ ಮಕ್ಕಳ ಚಿತ್ರ: ಲಿಟ್ಲ್ ಮಾಸ್ಟರ್
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಕಾರಣಿಕ ಶಿಶು
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ಅತ್ಯುತ್ತಮ ಬಾಲ ನಟ: ಮಾಸ್ಟರ್ ವಿ. ಅನಿಲ್ ಕುಮಾರ್
ಅತ್ಯುತ್ತಮ ಹಿನ್ನಲೆ ಗಾಯಕ: ವಾಸು ದೀಕ್ಷಿತ್
ಅತ್ಯುತ್ತಮ ಹಿನ್ನಲೆ ಗಾಯಕಿ: ಅನುರಾಧ ಭಟ್
ಡಾ. ವಿಷ್ಣುವರ್ಧನ ಪ್ರಶಸ್ತಿ: ರಾಜೇಶ್
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ: ಚಿ. ದತ್ತರಾಜ್
ಡಾ.ರಾಜ್ ಕುಮಾರ್ ಪ್ರಶಸ್ತಿ: ಎಂ. ಭಕ್ತವತ್ಸಲ
ಅತ್ಯುತ್ತಮ ಕಥೆ ಬರಹಗಾರ: ಡಾ. ಬರಗೂರು ರಾಮಚಂದ್ರಪ್ಪ
ಅತ್ಯುತ್ತಮ ಛಾಯಾಗ್ರಾಹಕ: ರಾಕೇಶ್
ಅತ್ಯುತ್ತಮ ಸಂಭಾಷಣೆಕಾರ: ಎಂ.ಎಸ್. ರಮೇಶ್
ಅತ್ಯುತ್ತಮ ಸಂಕಲನಕಾರ: ಪಿ.ಅರ್. ಸೌಂದರರಾಜ್