ಮುಂಬೈ : ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಿಣಿಯ ಹೀನಾಯ ಸೋಲಿನ ಹಿನ್ನಲೆಯಲ್ಲಿ ಎಚ್ಚೆತ್ತ ಬಿಸಿಸಿಐ ಟೀಂ ಇಂಡಿಯಾಗೆ ಮೇಜರ್ ಸರ್ಕರಿ ಮಾಡಿದ್ದು, ಹೊಸ ನಿರ್ದೇಶಕರನ್ನು ನೇಮಕ ಮಾಡಿದೆ.
ರವಿ ಶಾಸ್ತ್ರಿಯವರನ್ನು ಟೀಂ ಇಂಡಿಯಾದ ಏಕದಿನ ತಂಡದ ನಿರ್ದೇಶಕರನ್ನಾಗಿ ಬಿಸಿಸಿಐ ನೇಮಕ ಮಾಡಿದೆ. 5 ಟೆಸ್ಟ್ ಪಂದ್ಯಗಳಿಗೆ ರವಿಶಾಸ್ತ್ರಿ ನಿರ್ದೇಶಕರಾಗಿರಲಿದ್ದಾರೆ. ಸಹಾಯಕ ನಿರ್ದೇಶಕರಾಗಿ ಮಾಜಿ ಆಟಗಾರ ಸಂಜಯ್ ಬಂಗಾರ್ ಅವರನ್ನು ನೇಮಕಮಾಡಲಾಗಿದೆ.
ಫೀಲ್ಡೀಂಗ್ ಕೋಚ್ ಟ್ರೇವೋರ್ ಹಾಗೂ ಬೌಲಿಂಗ್ ಕೋಚ್ ಜೋಡ್ಯಾವಿಸ್ ಅವರಿಗೆ ವಿಶಾಂತ್ರಿ ನೀಡಿರುವ ಬಿಸಿಸಿಐ, ಸರಣಿಯಿಂದ ದೂರವಿಡಲು ನಿರ್ಧರಿಸಿದೆ. ಆರ್.ಶ್ರೀಧರ್ ರನ್ನು ಫೀಲ್ಡಿಂಗ್ ಸಹ ಕೋಚ್, ಭರತ್ ಅರುಣ್ ರನ್ನು ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡಲಾಗಿದೆ. ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾ ನಾಯಕರಾಗಿ ಮುಂದುವರೆಯಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.