ನವದೆಹಲಿ : ಕೃಷ್ಣ ಜನ್ಮಾಷ್ಠಮಿ ಅಗವಾಗಿ ಆಚರಿಸಲಾಗುವ ದಹಿ ಹಂಡಿ ಉತ್ಸವಕ್ಕೆ ಮುಂಬೈ ಕೋರ್ಟ್ ಹೇರಿದ್ದ ಮಾರ್ಗಸೂಚಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಕೃಷ್ಣ ಜನ್ಮಾಷ್ಠಮಿಯ ಮರುದಿನ ಮಹಾರಾಷ್ಟ್ರದ ಹಲವೆಡೆಗಳಲ್ಲಿ ದಹಿ ಹಂಡಿ ಉತ್ಸವ ಅಂದರೆ ಮೊಸರು ಗಡಿಗೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಚಿಕ್ಕಮಕ್ಕಳೂ ಭಾಗವಹಿಸುತ್ತಿದ್ದು, ಹಲವು ಮಕ್ಕಳು ಅವಗಢಕ್ಕೀಡಾಗಿದ್ದಾರೆ. ಹೀಗಾಗಿ ಈ ಸ್ಪರ್ಧೆಗೆ ಚಿಕ್ಕಮಕ್ಕಳು ಭಾಗವಹಿಸುವಂತಿಲ್ಲ ಎಂದು ಮುಂಬೈ ಕೋರ್ಟ್ ಸೂಚಿಸಿತ್ತು.
ಅಲ್ಲದೇ ಮುಂಬೈ ಕೋರ್ಟ್ ದಹಿ ಹಂಡಿ ಆಚರಣೆಗೆ ಭಾಗವಹಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನೂ ನೀಡಿತ್ತು. 22 ವರ್ಷಕ್ಕಿಂತ ಮೇಲ್ಪಟ್ಟ ಯುವಕರು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿತ್ತು.
ಮುಂಬೈ ಕೋರ್ಟ್ ಮಾರ್ಗಸೂಚಿ ಪ್ರಶ್ನಿಸಿ ಕೆಲ ನಾಗರಿಕರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಾರ್ಗಸೂಚಿಯನ್ನು ರದ್ದುಗೊಳಿಸಿದ್ದು, ದಹಿ ಹಂಡಿ ಉತ್ಸವದಲ್ಲಿ 12 ವರ್ಷದ ಮಕ್ಕಳೂ ಭಾಗವಹಿಸಬಹುದು ಎಂದು ಹೇಳಿದೆ.