ಆಯತಪ್ಪದ ಗೂಗ್ಲಿ ಎಸೆತ.
Rating :
Hero :
ಯಶ್
Heroine :
ಕೃತಿ ಖರಬಂಧ್
Other Cast :
ಅನಂತನಾಗ್, ಸುಧಾ ಬೆಳವಾಡಿ, ಸಾಧು, ನೀನಾಸಂ ಅಶ್ವತ್, ಹೊನ್ನವಳ್ಳಿ ಕೃಷ್ಣ, ಮತ್ತಿತರು.
Director :
ಪವನ್ ಒಡೆಯರ್
Music Director :
ಜೋಶ್ವಾ ಶ್ರೀಧರ್
Producer :
ಜಯಣ್ಣ ಬೋಗೆಂದ್ರ.
Release Date :
19-07-2013
ಇಲ್ಲಿ ನಾಯಕ ಮತ್ತು ನಾಯಕಿ ಪ್ರೀತಿಯ ಗೂಗ್ಲಿ ಎಸೆತವನ್ನು ಪರಸ್ಪರ ಎಸೆಯುತ್ತ ಹೊಗುತ್ತಾರೆ. ಯಾರು ಔಟ್ ಆಗುತ್ತಾರೆ ಎಂಬುದೇ ಕತೆಯ ಹಿಡಿತ.
ಕನ್ನಡದಲ್ಲಿ ಇಂತ ಕತೆಗಳು ಹಲವರು ಬಂದಿದ್ದರು, ಇಲ್ಲಿ ಪವನ್ ಒಡೆಯರ್ ತಮ್ಮ ಡಯಲಾಗ್ ಮೋಡಿಯನ್ನು ತೋರಿಸಿದ್ದಾರೆ. ಜನರು ಕತೆಗಿಂತ ಡಯಲಾಗ್ ಅನ್ನು ಎಂಜಾಯ್ ಮಾಡುತ್ತಾರೆ. ಆದರೆ ಕೇವಲ ಸಂಭಾಷಣೆಯೇ ಸಿನಿಮಾ ಅಲ್ಲ ಎಂಬುದನ್ನು ನಿರ್ದೇಶಕರು ತಿಳಿಯಬೇಕು. ಬರುತ್ತಿರುವ ಸಿನಿಮಾಗಳಿಗೆ ಹೋಲಿಸಿಕೊಂಡರೆ ಅಂತ ಹೊಸತನವೇನು ಇಲ್ಲ. ಎಲ್ಲ ಒಂದೇ ಪ್ಹಾರ್ಮೆಟ್.
ಒಬ್ಬ ಹುಡುಗ, (ಶರತ್-ಯಶ್) ಅವನೊಬ್ಬ ಅಸಮಾನ್ಯ ಬುದ್ದಿವಂತ. ಯಾವುದೇ ಹುಡುಗಿಯ ಹಿಡಿತಕ್ಕೆ ಸಿಗದೆ ತರ್ಲೆ ಮಾಡಿಕೊಂಡು ಓದುತ್ತಿರುವನು. ತಂದೆ (ಅನಂತನಾಗ್) ತಾಯಿಯ(ಸುಧಾಬೆಳವಡಿ) ಯ ಪ್ರಿಯ ಮಗ. ಮೆಡಿಕಲ್ ಓದುತ್ತಿರುವ ಹುಡುಗಿ ಬೆಂಗಳೂರಿಗೆ ಬರುತ್ತಾಳೆ. ಅಲ್ಲಿ ನಾಯಕನ ಬೇಟಿ. ಯಾರಿಗೂ ಸಿಗದ ಹುಡುಗ ಇವಳಿಗೆ ಮನಸೋಲುತ್ತಾನೆ. ಆದರೆ ಪ್ರೀತಿಯನ್ನು ವ್ಯಕ್ತಪಡಿಸುವುದಿಲ್ಲ. ಅವಳಿಗೂ ಪ್ರೀತಿಯಾಗಿರುತ್ತದೆ. ಅವಳೂ ಅದನ್ನು ಹೇಳಿಕೊಳ್ಳುವುದಿಲ್ಲ. ಹೇಳದ್ದಿದರು ಪ್ರೀತಿ ಇರುತ್ತದೆ. ಶರತ್ ನ ಪ್ರೀತಿಯ ಪೋಸಿಸಿವ್ನೆಸ್ ಅವಳನ್ನು ದೂರ ಮಾಡುತ್ತದೆ. ಅಲ್ಲ್ಲಿಂದ ಅವನಾಯ್ತು ಅವನ ಕೆಲಸವಾಯ್ತು. ಅವಳು ಹಾಗೆ ಇರುತ್ತಾಳೆ. ಮತ್ತೆ ಒಂದು ಸಂದರ್ಭ ಇಬ್ಬರನ್ನು ಒಂದುಗೂಡಿಸುತ್ತದೆ. ಆಗ ಮತ್ತೆ ಇಬ್ಬರು ಪ್ರೀತಿಯ ಗೂಗ್ಲಿ ಎಸೆತವನ್ನು ಪರಸ್ಪರ ಎಸೆಯುತ್ತ ಹೊಗುತ್ತಾರೆ. ನಾಯಕ ಗೆಲ್ಲುತ್ತಾನ..?ನಾಯಕಿ ಗೆಲ್ಲುತ್ತಾಳಾ..? ಪ್ರೀತಿ ಗೆಲ್ಲುತದ..? ಸಿನಿಮ ನೋಡಿ.
ಒಮ್ಮೆ ನೋಡಲು ಅಡ್ಡಿ ಇಲ್ಲ. ಆದರೆ ರಿಪೀಟಾಗುವ ಸೀನ್ಗಳು ಬೋರ್ ಅನ್ನಿಸಬಾರದೆಂದರೆ ಪಕ್ಕದಲ್ಲಿ ಯಾರಾದರು ಇದ್ದರೆ ಒಳ್ಳೆಯದು.
ಸಿನಿಮಾದ ಪ್ಲಸ್ ಪಾಯಿಂಟ್ ಅಂದರೆ ಹಿನ್ನೆಲೆ ಸಂಗೀತ. ದೃಶ್ಯಗಳನ್ನು ಮೇಲೆತ್ತುವಲ್ಲಿ ಅನೂಪ್ ಚೆನ್ನಾಗಿ ಕೆಲಸ ಮಾಡಿದ್ದಾರೆ. ವೈದಿ ಕ್ಯಾಮರ ಗುಡ್. ಜೋಶ್ವಾ ಶ್ರೀಧರ್ ಸೌನ್ಡಿಂಗ್ ಚನ್ನಾಗಿದೆ. ಸನತ್ ಸಂಕಲನ ಓಕೆ.
ಅಬ್ಬರದ ಎಲ್ಲ ಅಂಶಗಳು ಸಿನಿಮಾದಲ್ಲಿದೆ. ಅಂದರೆ ಪುಲ್ ಕಮರ್ಷಿಯಲ್ ಸಿನಿಮ. ಯಶ್ ಮತ್ತು ಕರಬಂಧ ಉತ್ತಮವಾಗಿ ಪರ್ಫಾರ್ಮ್ ಮಾಡಿದ್ದರೆ. ಉಳಿದಂತೆ ಅನಂತನಾಗ್, ರಾಜಮಾತೆ ಸುಧಾ ಬೆಳವಾಡಿ, ಸಾಧು, ಪಾತ್ರಗಳಿಗೆ ಮೊಸಮಾಡಿಲ್ಲ.
ವರದಿ: ನಟರಾಜ್ ಎಸ್ ಭಟ್