Untitled Document
Sign Up | Login    
Dynamic website and Portals
  
Home >> Movie Home >> ಗಣೇಶನ ಹಬ್ಬದಂದು ‘ದಿಲ್‌ರಂಗೀಲ‘ ಚಿತ್ರಕ್ಕೆ ಚಾಲನೆ
ಗಣೇಶನ ಹಬ್ಬದಂದು ‘ದಿಲ್‌ರಂಗೀಲ‘ ಚಿತ್ರಕ್ಕೆ ಚಾಲನೆ
ಗಣೇಶನ ಹಬ್ಬದಂದು ‘ದಿಲ್‌ರಂಗೀಲ‘ ಚಿತ್ರಕ್ಕೆ ಚಾಲನೆ

ಕೆ.ಮಂಜು ಸಿನಿಮಾಸ್ ಲಾಂಛನದಲ್ಲಿ ಕೆ.ಮಂಜು ಅವರು ನಿರ್ಮಿಸುತ್ತಿರುವ ‘ದಿಲ್‌ರಂಗೀಲ’ ಚಿತ್ರ ಗಣೇಶನ ಹಬ್ಬದ ಶುಭದಿನ ಜೆ.ಪಿ.ನಗರದ ವರಪ್ರದ ವೆಂಕಟೇಶ್ವರ ದೇವಸ್ಥಾನದಲ್ಲಿ ಆರಂಭವಾಯಿತು.

ಗಣೇಶನ ಮೇಲೆ ಸೆರೆಹಿಡಿಯಲಾದ ಪ್ರಥಮ ಸನ್ನಿವೇಶಕ್ಕೆ ಶಿಲ್ಪಾಗಣೇಶ್ ಆರಂಭ ಫಲಕ ತೋರಿದರೆ, ರಾಮು ಕ್ಯಾಮೆರಾ ಚಾಲನೆ ಮಾಡಿದರು.

ಗೋಲ್ಡನ್‌ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು ಪ್ರೀತಂಗುಬ್ಬಿ ನಿರ್ದೇಶಿಸುತ್ತಿದ್ದಾರೆ. ಹಿಂದೆ ಗಣೇಶ್ ಅಭಿನಯದ ‘ಮಳೆಯಲಿ ಜೊತೆಯಲಿ’ ಚಿತ್ರವನ್ನು ಪ್ರೀತಂಗುಬ್ಬಿ ಅವರೇ ನಿರ್ದೇಶಿಸಿದ್ದರು. ರಚಿತರಾಂ, ಪ್ರಿಯಾಂಕರಾವ್, ರಂಗಾಯಣರಘು, ಅಚ್ಯುತಕುಮಾರ್, ಯಮುನ, ಶ್ರೀನಿಧಿ, ಗಿರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಎಚ್.ಸಿ.ವೇಣು ಅವರ ಛಾಯಾಗ್ರಹಣವಿದೆ. ಅರ್ಜುನ್‌ಜನ್ಯ ಸಂಗೀತ ನಿರ್ದೇಶನ, ದೀಪು.ಎಸ್.ಕುಮಾರ್ ಸಂಕಲನ, ಮುರಳಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ಮೈಸೂರು, ಗೋವಾ ಹಾಗೂ ವಿದೇಶದಲ್ಲಿ ನಡೆಯಲಿದೆ. ‘ದಿಲ್‌ರಂಗೀಲ’ಕ್ಕೆ ಪ್ರಶಾಂತ್ ಸಂಭಾಷಣೆ ಬರೆದರೆ ಯೋಗರಾಜ್‌ಭಟ್, ಜಯಂತಕಾಯ್ಕಿಣಿ ಗೀತರಚನೆ ಮಾಡಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited