ಅದ್ವಿಕ್ ಕ್ರಿಯೇಷನ್ಸ್ ಲಾಂಛನದಲ್ಲಿ ಬಸವರೆಡ್ಡಿ ಅವರು ನಿರ್ಮಿಸಿರುವ ‘ಮಂದಹಾಸ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ರಾಜೇಶ್.ಕೆ.ನಾಯರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವೀರಸಮರ್ಥ್ ಸಂಗೀತ ನೀಡಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮದನ್-ಹರಿಣಿ, ಲಾಂಜಿನಸ್ ಫ಼ರ್ನಾಂಡಿಸ್(ಬಾಲಿವುಡ್ ಖ್ಯಾತಿ) ನೃತ್ಯ ನಿರ್ದೇಶನ, ಮಂಜು ಮಾಂಡವ್ಯ ಸಂಭಾಷಣೆ, ಶಶಿಧರ ಅಡಪ ಕಲಾನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಕೆ.ಎಂ.ವೀರೇಶ್.
ರಾಖೇಶ್ ಹಾಗೂ ಚೇತನ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ನಿಕ್ಕಿ. ಶ್ರೀನಾಥ್, ವಿಜಯಸಾರಥಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.