ಶ್ರೀಸಂಕೇಶ್ವರ ಕಂಬೈನ್ಸ್ ಲಾಂಛನದಲ್ಲಿ ಅಮರ್ಚಂದ್ ಜೈನ್ ಅರ್ಪಿಸುವ, ವಿಜಯ್ ಸುರಾನ ನಿರ್ಮಿಸಿರುವ ‘ಭೈರವಿ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಹ.ಸೂ.ರಾಜಶೇಖರ್ ನಿರ್ದೇಶಿಸಿರುವ ಈ ಚಿತ್ರದ ನಾಯಕಿಯಾಗಿ ಆಯಿಷಾ ಅಭಿನಯಿಸಿದ್ದಾರೆ. ರಮೇಶ್ಭಟ್, ಸುಚೀಂದ್ರಪ್ರಸಾದ್, ಮೈಕೋ ನಾಗರಾಜ್, ನೀನಾಸಂ ಅಶ್ವತ್, ಎಂ.ಎಸ್.ಉಮೇಶ್, ಮೈಕೋ ಶಿವು, ಹಂಸ, ಸಂಗೀತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ವೀರಸಮರ್ಥ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಗೌರಿವೆಂಕಟೇಶ್ ಅವರ ಛಾಯಾಗ್ರಹಣವಿದೆ. ಕೆ.ಡಿ.ವೆಂಕಟೇಶ್ ಸಾಹಸ ನಿರ್ದೇಶನ, ಬಾಬುಖಾನ್ ಕಲಾ ನಿರ್ದೇಶನವಿರುವ ‘ಭೈರವಿ‘ಗೆ ಶೇಷಗಿರಿ ಸಂಭಾಷಣೆ ಬರೆದಿದ್ದಾರೆ. ಮುರುಗೇಶ್ ಜವಳಿ, ರಾಜಶೇಖರ್ ಇಟಗಿ, ಪನ್ನಲಾಲ್ ಕೊಠಾರಿ ಅವರುಗಳ ಸಹ ನಿರ್ಮಾಣ ಈ ಚಿತ್ರಕ್ಕಿದೆ.