ಸಂದೇಶ್ ಕಂಬೈನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅವರು ನಿರ್ಮಿಸಿರುವ ‘ಮಂಗನ ಕೈಲಿ ಮಾಣಿಕ್ಯ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಾಜೇಂದ್ರಕಾರಂತ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ರಮೇಶ್ಅರವಿಂದ್, ರವಿಶಂಕರ್ಗೌಡ, ರಂಗಾಯಣರಘು, ಹರ್ಷಿಕಾ ಪೂಣಚ್ಛ, ಸೋನಿಯಾಗೌಡ, ಖುಷಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಹಾಡುಗಳನ್ನು ರಚಿಸಿದ್ದಾರೆ. ಜೆ.ಜಿ.ಕೃಷ್ಣ ಛಾಯಾಗ್ರಹಣ, ರಾಜೇಶ್ರಾಮನಾಥ್ ಸಂಗೀತ, ನಾಗೇಂದ್ರಅರಸ್ ಸಂಕಲನ, ಇಮ್ರಾನ್ ಸರ್ದಾರಿಯಾ ನೃತ್ಯನಿರ್ದೇಶನ ಹಾಗೂ ಇಸ್ಮಾಯಿಲ್ ಕಲಾ ನಿರ್ದೇಶನ ‘ಮಂಗನ ಕೈಲಿ ಮಾಣಿಕ್ಯ’ ಚಿತ್ರಕ್ಕಿದೆ.