ಚತುರ್ಥಿ ಕ್ರಿಯೇಷನ್ಸ್ ಲಾಂಛನದಲ್ಲಿ ಕೆ.ಎಂ. ಶಂಕರ್ ನಿರ್ಮಿಸುತ್ತಿರುವ ಬರ್ಫಿ ಚಿತ್ರಕ್ಕೆ ಕಳೆದ ವಾರ ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ರೀ ರೆಕಾರ್ಡಿಂಗ್ ಕಾರ್ಯ ನಡೆಯಿತು.
ಸಧ್ಯದಲ್ಲೇ ಪ್ರಥಮ ಪ್ರತಿ ಹೊರಬರಲಿದ್ದು, ಚಿತ್ರವನ್ನು ಜುಲೈ ತಿಂಗಳ 2ನೇ ವಾರದಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಶೇಖರ್ ಕಥೆ-ಚಿತ್ರಕಥೆ ರಚಿಸಿ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ಬಿ.ಎ. ಮಧು ಸಂಭಾಷಣೆ, ಜಯಂತ್ ಕಾಯ್ಕಿಣಿ ಕವಿರಾಜ್, ಗೌಸ್ ಫಿರ್, ಹೃದಯಶಿವ ಸಾಹಿತ್ಯ, ಕೆ.ಎಂ. ಪ್ರಕಾಶ್ ಸಂಕಲನ, ಎಸ್. ಬಾಹುಬಲಿ ಸಹಕಾರ ನಿರ್ದೇಶನ, ರವಿವರ್ಮ ಸಾಹಸ, ಹರ್ಷ ಕಂಬಿರಾಜ್ ನೃತ್ಯ ನಿರ್ದೇಶನವಿದೆ.
ದಿಗಂತ್, ಭಾಮಾ, ಸುಧಾ ಬೆಳವಾಡಿ, ಜೈಜಗದೀಶ್, ಹರೀಶ್ ರಾಜ್, ದಿಲೀಪ್ ರಾಜ್, ಸುಚೇಂದ್ರ ಪ್ರಸಾದ್, ಪವಿತ್ರಾ ಲೋಕೇಶ್, ಶಂಕರ್ ಭಟ್, ಸಂಯುಕ್ತ ಬೆಳವಾಡಿ ಇಂದ್ರಜಿತ್ ಲಂಕೇಶ್ ಇನ್ನು ಮುಂತಾದವರು ಅಭಿನಯಿಸಿದ್ದಾರೆ.