Untitled Document
Sign Up | Login    
Dynamic website and Portals
  
Home >> Movie Home >> ಈ ವಾರ ತೆರೆಗೆ ‘ಬಿಡಲಾರೆ ಎಂದೂ ನಿನ್ನ’
ಈ ವಾರ ತೆರೆಗೆ ‘ಬಿಡಲಾರೆ ಎಂದೂ ನಿನ್ನ’
ಈ ವಾರ ತೆರೆಗೆ ‘ಬಿಡಲಾರೆ ಎಂದೂ ನಿನ್ನ’

ಅಮ್ಮ ಟಾಕೀಸ್ ಲಾಂಛನದಲ್ಲಿ ಸಿ.ಚಂದ್ರಶೇಖರ್ ಹೊಸಕೋಟೆ ಅವರು ನಿರ್ಮಿಸಿರುವ ‘ಬಿಡಲಾರೆ ಎಂದೂ ನಿನ್ನ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಉಮೇಶ್ ಬಾದರದಿನ್ನಿ ಚೊಚ್ಚಲ ನಿರ್ದೇಶನದ ಈ ಚಿತ್ರ ಕುತೂಹಲಕಾರಿ ಕಥೆಯನ್ನೊಳಗೊಂಡಿದೆ. ನಿರ್ದೇಶಕರೇ ಚಿತ್ರಕ್ಕೆ ಕಥೆ ಬರೆದಿರುವ ನಿರ್ದೇಶಕರು ನಾಲ್ಕು ಹಾಡುಗಳನ್ನು ರಚಿಸಿದ್ದಾರೆ.

ನವೀನ್‌ಕೃಷ್ಣ ನಾಯಕರಾಗಿರುವ ಈ ಚಿತ್ರದ ತಾರಾಬಳಗದಲ್ಲಿ ಸ್ವಾತಿ, ಭೂಮಿಕ, ಜೈಜಗದೀಶ್, ಸಾಧುಕೋಕಿಲಾ, ರಾಜುತಾಳಿಕೋಟೆ, ಅಶೋಕ್ ಬಾದರದಿನ್ನಿ, ಬಿರಾದಾರ್, ಮುರಳಿ ಹೊಸಕೋಟೆ, ಆರ್.ಡಿ.ಬಾಬು ಮುಂತಾದವರಿದ್ದಾರೆ.

ಬಾಬು ಮಾಸ್ಟರ್ ಸಂಗೀತ ನೀಡಿರುವ ಈ ಚಿತ್ರಕ್ಕೆ ರೇಣುಕುಮಾರ್ ಅವರ ಛಾಯಾಗ್ರಹಣವಿದೆ. ರಾಜು ನೃತ್ಯ ನಿರ್ದೆಶನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ವಿನಾಯಕರಾಮ ಕಲಾಗಾರು ಸಂಭಾಷಣೆ ಬರೆದಿದ್ದಾರೆ. ಮುರಳಿ ಹೊಸಕೋಟೆ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited