ಈ ವಾರ ‘ಆಟೋ ರಾಜ’ ನಿಮ್ಮನ್ನು ಮನರಂಜನೆ ಎಂಬ ಗಾಡಿಯಲ್ಲಿ ಕುಳ್ಳಿರಿಸಿ ಸಂತೋಷ ಪಡಿಸಲು ರಜತ ಪರದೆಯ ಮೇಲೆ ಆಕ್ರಮಿಸಲಿದ್ದಾನೆ.
ಕನ್ನಡ ಚಿತ್ರರಂಗದಲ್ಲಿ ಅನೇಕನೆಕ ಪ್ರಸಿದ್ದ ನಟರುಗಳು ಆಟೋ ಚಲಾಯಿಸಿ ಮನಸೂರೆಗೊಂಡಿದ್ದಾರೆ. ಅದರಲ್ಲಿ ‘ಶಂಕರ್ ನಾಗ್’ ಅಗ್ರಗಣ್ಯರು. ಅವರ ನೆನಪಿಗಾಗಿ 2013 ‘ಆಟೋ ರಾಜ’ ತಯಾರಿಸಿದ್ದಾರೆ ನಿರ್ದೇಶಕ ಉದಯ ಪ್ರಕಾಶ್. ಅವರು ‘ವಿ ಸ್ಯಾನ್ ಸಿಟಿ’ ಸಂಸ್ಥೆಯ ಗಿರೀಷ್ ಹಾಗೂ ವಿಶ್ವಸ್ ಕಾರ್ಯಪ್ಪ ಅವರುಗಳಿಗೆ ಈ ಚಿತ್ರ ತಯಾರಿಸಿದ್ದಾರೆ.
‘ಸೆನ್ಸಾರ್’ ಮಂಡಳಿಯಿಂದ ‘ಯು/ಎ’ ಅರ್ಹತಾ ಪತ್ರವ್ನನು ಚಿತ್ರವು ಪಡೆದುಕೊಂಡಿದೆ. ಚಿತ್ರದ ಶೀರ್ಷಿಕೆ ನಾಮಕರಣದಿಂದಲೇ ಸಾಮಾಜಿಕ ಕಳಕಳಿಯನ್ನು ಮೆರೆದ ‘ವಿ ಸ್ಯಾನ್ ಸಿಟಿ’- ಬೈಲುಕುಪ್ಪೆಯಲ್ಲಿ ಮಂಜುಳ ಎಂಬುವರಿಗೆ ನಾಯಕನ ಹೆಸರು ಸೂಚಿಸಿದ್ದಕ್ಕೆ ಲಕ್ಕಿ ಡ್ರಾದಲ್ಲಿ ಖಾಲಿ ನಿವೇಶನವನ್ನು ಬಹುಮಾನವಾಗಿ ಕೊಟ್ಟದ್ದು, ಆಟೋ ಚಾಲಕರ ಸಮ್ಮುಖದಲ್ಲೇ ಚಿತ್ರದ ಧ್ವನಿ ಸುರುಳಿ ಬಿಡುಗಡೆಮಾಡಿ ‘ಆಟೋ ರಾಜ’ ಚಿತ್ರದ ಪೋಸ್ಟರ್ ಅನ್ನು ರವಿಶಂಕರ್ ಗುರೂಜಿ ಅವರು ಬಿಡುಗಡೆ ಮಾಡಿರುವುದು ತಿಳಿದೇ ಇದೆ.
ನಿರ್ದೇಶಕ ಉದಯ ಪ್ರಕಾಷ್ 62 ದಿವಸಗಳ ಚಿತ್ರೀಕರಣವನ್ನು ‘ಆಟೋ ರಾಜ’ ಚಿತ್ರಕ್ಕಾಗಿ ಬೆಂಗಳೂರು, ಬಾದಾಮಿ, ಚಿಕ್ಕ್ಮಗಳೂರು ಹಾಗೂ ಇನ್ನಿತರ ಸ್ಥಳಗಳಲ್ಲಿ ಮಾಡಿರುವರು. ಇಂದಿನ ‘ಆಟೋ ರಾಜ’ ಚಿತ್ರದಲ್ಲಿ ನಾಯಕ ನಟ ಗಣೇಶ್ ಸೆಂಟಿಮೆಂಟ್, ಹಾಸ್ಯ, ಸಹಾಸ ಅಭಿವ್ಯಕ್ತದ ಮೂಲಕ ತನ್ನದೇ ಆದ ಛಾಪನ್ನು ನೀಡಿದ್ದಾರೆ.
ಭಾಮಾ, ದೀಪಿಕ ಕಾಮಯ್ಯ ನಾಯಕಿಯರು. ಮಂಜುನಾಥ್ ನಾಯಕ್ ಅವರ ಛಾಯಾಗ್ರಹಣ, ಅರ್ಜುನ್ ಜನ್ಯ ಅವರ ಸಂಗೀತ ಈ ಚಿತ್ರಕ್ಕಿದೆ.