Untitled Document
Sign Up | Login    
Dynamic website and Portals
  
Home >> Movie Home >> ಜಿಂಕೆಮರಿ ಮೇ.24 ರಂದು ತೆರೆಗೆ
ಜಿಂಕೆಮರಿ ಮೇ.24 ರಂದು ತೆರೆಗೆ
ಜಿಂಕೆಮರಿ ಮೇ.24 ರಂದು ತೆರೆಗೆ
ಯೋಗೇಶ್ ಮತ್ತು ಸೋನಿಯ ಗೌಡ

ಪಿಕಾಕ್ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಮಹೇಶ್ ಬಾಳೆಕುಂದ್ರಿ ನಿರ್ಮಿಸಿ ಕೆ. ಪಿ ನವೀನ್ ಕುಮಾರ್ ನಿರ್ದೇಶನದ ಚಿತ್ರ ‘ಜಿಂಕೆಮರಿ’ ಈ ವಾರ ತೆರೆ ಕಾಣುತ್ತಿದ್ದು, ಮನೆಮಂದಿಯೆಲ್ಲಾ ನೋಡುವ ಚಿತ್ರ ಆಗಿದೆ. ‘ಜಿಂಕೆಮರಿ’ ಚಿತ್ರ ಬೆಂಗಳೂರು, ಸಕಲೆಶಪುರ, ಬ್ಯಾಂಗ್ ಕಾಕ್ ದೇಶದಲ್ಲೂ ಚಿತ್ರೀಕರಣ ನಡೆಸಿದೆ. ನಾಯಕ ಯೋಗೇಶ್ ಅವರ ‘ನಂದ ಲವ್ ನಂದಿತ’ ಚಿತ್ರದ ಹಾಡಿನ ಸಾಲಿನಿಂದ ಆಯ್ಕೆ ಮಾಡಿಕೊಂಡ ಶೀರ್ಷಿಕೆ ‘ಜಿಂಕೆಮರಿ’ ಚಿತ್ರದ ನಾಯಕ ಯೋಗೇಶ್ ಅವರೇ. ಸೋನಿಯ ಗೌಡ ಈ ಚಿತ್ರದ ನಾಯಕಿ.

ಈ ಹಿಂದೆ ‘9 ಟು 12’ ಚಿತ್ರಕ್ಕೆ ಸಹ ನಿರ್ಮಾಪಕರಾದ ಮಹೇಶ್ ಬಾಳೆಕುಂದ್ರಿ ಬೆಳಗಾವಿ ಮೂಲದ ರಿಯಲ್ ಎಸ್ಟೇಟ್ ಹಾಗೂ ಏಡಿಬಲ್ ಎಣ್ಣೆ ವ್ಯಾಪಾರಿ ಈ ಚಿತ್ರದಲ್ಲಿ ಅರಕ್ಷಕನ ಪತ್ರದಲ್ಲೂ ಮಿಂಚಿದ್ದಾರೆ. ಬಾಳೆಕುಂದ್ರಿ ಅವರು ಮರುಭೂಮಿಯಾಗಿದೆ ನಿನ್ನ ಮನಸ್ಸು.... ಎಂಬ ಗೀತೆಯನ್ನು ಸಹ ಚಿತ್ರಕ್ಕೆ ಹಾಡಿದ್ದಾರೆ.

ಸಾಯಿ ಕಾರ್ತಿಕ್ ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿರುವರು. ಸಹಾಯಕ ನಿರ್ದೇಶಕರಾಗಿ ದುಡಿದಿರುವ ನವೀನ್ ಕುಮಾರ್ ಈ ಚಿತ್ರದಿಂದ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ವೀನಸ್ ಮೂರ್ತಿ ಈ ಚಿತ್ರದ ಛಾಯಾಗ್ರಾಹಕರು.

ಯೋಗೇಶ್, ಸೋನಿಯ ಗೌಡ ಜೊತೆಯಲ್ಲಿ ಅವಿನಾಷ್, ಶರತ್ ಲೋಹಿತಾಶ್ವ, ಶೋಭ್ ರಾಜ್, ರಮೇಶ್ ಭಟ್, ಜೈ ಜಗದೀಶ್, ಹರೀಶ್ ರಾಯ್, ಅಚ್ಯುತ್ ಕುಮಾರ್, ಶಾರದಮ್ಮ, ವಿಜಯ್ ಕೌಂಡಿನ್ಯ, ನೀನಾಸಮ್ ಅಶ್ವತ್ಥ್, ಹರೀಶ್ ರಾಜ್, ಬುಲ್ಲೆಟ್ ಪ್ರಕಾಷ್, ಮುನಿ, ಋತು ಹಾಗೂ ಇನ್ನಿತರರು ಇದ್ದಾರೆ. ಸುಮನ್ ರಂಗನಾಥ್ ಅವರ ಐಟೆಮ್ ಹಾಡೊಂದು ಚಿತ್ರದ ವಿಶೇಷಗಳಲ್ಲಿ ಒಂದು.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited