ಈ ವಾರ ಚೇತನ್ ಚಂದ್ರ ಅವರ ಚೈತನ್ಯದ ಪ್ರದರ್ಶನದ ಸಮಯ.ವಿದ್ಯಾವಂತ ನಟ ಈಗಾಗಲೇ ಅಭಿನಯದಲ್ಲಿ ದಾಪುಗಾಲು ಹಾಕಿರುವುದು ನಿಜ ಸಂಗತಿ. ಆದರೆ ‘ಕುಂಭ ರಾಶಿ’ ಮೂಲಕ ಚೇತನ್ ಚಂದ್ರ 8 ಪ್ಯಾಕ್ ಅಬ್ಸ್ ಪ್ರದರ್ಶನವನ್ನು ಕನ್ನಡ ಪ್ರೇಕ್ಷಕರು ಕಣ್ತುಂಬಿಸಿಕೊಳ್ಳುವ ಸಮಯ.
‘ಕುಂಭ ರಾಶಿ’ ಗುಲ್ಬರ್ಗಾದ ಶ್ರೀ ರೇವಣ್ಣ ಸಿದ್ದೇಶ್ವರ ದೇವಸ್ಥಾನದಲ್ಲಿ ಮೊದಲ ದೃಶ್ಯವನ್ನು ಸೆರೆ ಹಿಡಿದು ಅದೇ ಸ್ಥಳದಲ್ಲಿ ಚಿತ್ರೀಕರಣ ಸಹ ಪೂರ್ಣ ಗೊಳಿಸಿದ ಚಿತ್ರ ? ನಿರ್ಮಾಪಕರು ಶ್ರೀಮತಿ ನಾಗಮ್ಮ ಪಾಟೀಲ್.
ನವ ಯುವಕ ಚೇತನ್ ಚಂದ್ರ ಅವರ 8 ಪ್ಯಾಕ್ ಜುಮ್ಮೆನಿಸುವ ಸಾಹಸ ಔತಣ ಅಲ್ಲದೆ ಭಾವನಾತ್ಮಕ ಹಾಗೂ ಪ್ರೇಮದ ಲೇಪನ ಹೊತ್ತುಕೊಂಡಿರುವ ‘ಕುಂಭ ರಾಶಿ’ ಮುಲ್ಲಯ್ಯನಗಿರಿ ಬೆಟ್ಟ, ಕುಂದಾದ್ರಿ ಗುಂಡಿ, ದತ್ಥ ಪೀಟ ಸುತ್ತ ಮುತ್ತಲು ಕ್ಯಾಮರಾ ತುಂಬಿಸಿಕೊಂಡಿರುವ ಚಿತ್ರ ಶಕ್ತಿ ಹಾಗೂ ಯುಕ್ತಿಯ ಸಂಗಮ.
‘ಕುಂಭ ರಾಶಿ’ನಿರ್ದೇಶಕರು ಚಂದ್ರಹಾಸ. ಸ್ಮಶಾನದ ಪರಿಸರದಲ್ಲಿ ಬೆಳೆಯುವ ನಾಯಕ ಧೈರ್ಯ ಸ್ಥೈರ್ಯಗಳಿಂದ ಮಾರ್ಪಾಟಗುವ ಬಗೆಯೆ ಜುಮ್ಮೆನ್ನುವಂತಿದೆ ಎನ್ನುತ್ತಾರೆ ಅವರು. ಕೌರವ ವೆಂಕಟೇಶ್ ಅವರ ಸಾಹಸ, ಜೈ ಆನಂದ್ ಅವರ ಛಾಯಾಗ್ರಹಣ, ಎಸ್ ಕೆ ಸಾಲಿ ಅವರ ಸಂಭಾಷಣೆ ಇರುವ ಚಿತ್ರದಲ್ಲಿ ರವಿ ತೇಜ ಅವರು ಪ್ರಮುಖ ಪಾತ್ರದಲ್ಲಿ ಇದ್ದಾರೆ.
ಶ್ರೀವತ್ಸ ಅವರು ಕನ್ನಡ ಸಿನೆಮಕ್ಕೆ ‘ಕುಂಭ ರಾಶಿ’ ಮೂಲಕ ಸಂಗೀತ ನಿರ್ದೇಶಕರಾಗಿ ಆಗಮಿಸಿದ್ದಾರೆ. ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಅವರ ಮೂರು ಹಾಡುಗಳು, ಅರಸು ಅಂತಾರೆ, ಹರೀಶ್ ಶೃಂಗ,ವಿಜ್ಞೇಶ್ವರ ವಿಶ್ವ ಅವರ ಸಾಹಿತ್ಯ ಹಾಡುಗಳಿಗೆ ಇದೆ.
ರೂಪಿಕಾ ಈ ಚಿತ್ರದ ನಾಯಕಿ. ಶರತ್ ಲೋಹಿತಾಶ್ವ, ಗುರುರಾಜ್ ಹೊಸಕೋಟೆ, ಹರೀಶ್ ರಾಯ್, ಮೋಹನ್ ಜುನೇಜ, ಬಿರಾದಾರ ಹಾಗೂ ಇತರರು ಪೋಷಕ ಪಾತ್ರದಲ್ಲಿ ಇದ್ದಾರೆ.