‘ಜಿಂಕೆಮರಿ’ ರಜತ ಪರದೆಯಮೇಲೆ ಹಾರಲು ಎಲ್ಲ ಮೆಟ್ಟಿಲುಗಳು ದಾಟಿದೆ, ಕೆಲವು ದಿನಗಳ ಹಿಂದೆ ಸೆನ್ಸಾರ್ ಮಂಡಳಿಯಿಂದ ಯು/ಎ ಅರ್ಹತಾ ಪತ್ರ ಪಡೆದು ಮುಂದಿನ ವಾರ ಅಂದರೆ ಮೇ 17 ರಂದು ರಜತ ಪರದೆಯ ಮೇಲೆಯೇ ಜಿಗಿಯುತ್ತಾ, ಪ್ರೇಕ್ಷಕರ ಮನಸನ್ನು ಸೂರೆಗೊಳ್ಳಲು ನಿರ್ಧರಿಸಿದೆ.
ಇದು ಪಿಕಾಕ್ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಮಹೇಶ್ ಬಾಳೆಕುಂದ್ರಿ ನಿರ್ಮಿಸಿ ಕೆ. ಪಿ ನವೀನ್ ಕುಮಾರ್ ನಿರ್ದೇಶನದ ಚಿತ್ರ. ಬೆಂಗಳೂರು, ಸಕಳೆಶ್ಪುರ, ಬ್ಯಾಂಗ್ ಕಾಕ್ ದೇಶದಲ್ಲೂ ಚಿತ್ರೀಕರಣ ಮಾಡಿದ ಚಿತ್ರ. ನಾಯಕ ಯೋಗೇಶ್ ಅವರ ‘ನಂದ ಲವ್ ನಂದಿತ’ ಚಿತ್ರದ ಹಾಡಿನ ಸಾಲಿನಿಂದ ಆಯ್ಕೆ ಮಾಡಿಕೊಂಡ ಶೀರ್ಷಿಕೆ ‘ಜಿಂಕೆಮರಿ’ ಚಿತ್ರದ ನಾಯಕರು ಯೋಗೇಶ್ ಅವರೇ. ಸೋನಿಯ ಗೌಡ ಈ ಚಿತ್ರದ ನಾಯಕಿ.
ಈ ಹಿಂದೆ ‘9 ಟು 12’ ಚಿತ್ರಕ್ಕೆ ಸಹ ನಿರ್ಮಾಪಕರದ ಮಹೇಶ್ ಬಾಳೆಕುಂದ್ರಿ ಬೆಳಗಾವಿ ಮೂಲದ ರಿಯಲ್ ಎಸ್ಟೇಟ್ ಹಾಗೂ ಏಡಿಬಲ್ ಎಣ್ಣೆ ವ್ಯಾಪಾರಿ ಈ ಚಿತ್ರದಲ್ಲಿ ಅರಕ್ಷಕನ ಪತ್ರದಲ್ಲೂ ಮಿಂಚಿದ್ದಾರೆ. ಬಾಳೆಕುಂದ್ರಿ ಅವರು ಮರುಭೂಮಿಯಾಗಿದೆ ನಿನ್ನ ಮನಸ್ಸು.... ಎಂಬ ಗೀತೆಯನ್ನು ಸಹ ಚಿತ್ರಕ್ಕೆ ಹಾಡಿದ್ದಾರೆ. ಇದೊಂದು ಹಾಸ್ಯ, ಪ್ರೀತಿ, ಮನೆ ಮಂದಿಗೆಲ್ಲ ಮನಸಾರೆ ಹಿಡಿಸುವ ಚಿತ್ರ ಎನ್ನುತ್ತಾರೆ ನಿರ್ಮಾಪಕರು.
ಸಾಯಿ ಕಾರ್ತಿಕ್ ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿರುವರು. ಎಂಟು ವರ್ಷಗಳಿಂದ ಸಹಾಯಕ ನಿರ್ದೇಶಕರಗಿ ದುಡಿದಿರುವ ನವೀನ್ ಕುಮಾರ್ ಈ ಚಿತ್ರದಿಂದ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ವೀನಸ್ ಮೂರ್ತಿ ಈ ಚಿತ್ರದ ಛಾಯಾಗ್ರಾಹಕರು.
ಯೋಗೇಶ್, ಸೋನಿಯ ಗೌಡ ಜೊತೆಯಲ್ಲಿ ಅವಿನಾಶ್, ಶರತ್ ಲೋಹಿತಾಶ್ವ, ಶೋಬಾರಾಜ್, ರಮೇಶ್ ಭಟ್, ಜೈ ಜಗದೀಶ್, ಹರೀಶ್ ರಾಯ್, ಅಚ್ಯುತ್ ಕುಮಾರ್, ಶಾರದಮ್ಮ, ವಿಜಯ್ ಕೌಂಡಿನ್ಯ, ನಿನಸಮ್ ಅಶ್ವಥ್, ಹರೀಶ್ ರಾಜ್, ಬುಲ್ಲೆಟ್ ಪ್ರಕಾಷ್, ಮುನಿ, ಋತು ಹಾಗೂ ಇನ್ನಿತರರು ಇದ್ದಾರೆ.