‘ಜಟಾಯು’ ಈ ವಾರ ರಾಜ್ಯಾದ್ಯಂತ ಬೆಳ್ಳಿ ಪರದೆಯ ಮೇಲೆ ಬರಲಿದೆ. ಸಾಹಸ ಹಾಗೂ ಭಾವನಾತ್ಮಕ ವಿಚಾರಗಳ ಜೊತೆಗೆ ಹಾಸ್ಯ ಹಾಗೂ ಸುಂದರ ಹಾಡುಗಳ ಮಿಶ್ರಿತ ‘ಜಟಾಯು’ ನಿರ್ದೇಶಕ ರಾಜ್ ಅವರ ಅಭಿನಯದ ಮಹತ್ವಾಕಾಂಕ್ಷೆಯ ಚಿತ್ರ.
‘ಜಟಾಯು’ನಿಷ್ಟೆಯ ಕಾಯಕದಲ್ಲಿ ತೊಡಗಿರುವವನು - ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗಿರುವ ಈ ಚಿತ್ರದ ನಿರ್ಮಾಪಕರು ಪ್ರಭಾಕರ್.
‘ಸಂಚಾರಿ’ ಅಲ್ಲಿ ಕೇವಲ ನಟನೆ ಅಷ್ಟೇ ಮಾಡಿದ್ದ ರಾಜ್ ಎರಡನೆಯ ಚಿತ್ರದಲ್ಲಿ ನಟನೆ ಅಲ್ಲದೆ ನಿರ್ದೇಶಕನಾಗಿ ಬಡ್ತಿ ಪಡೆದು ಪಕ್ಕಾ ವ್ಯಾಪಾರಿ ಸಿನೆಮಾದ ಜೊತೆ ಹೃದಯಂಗಮ ಸನ್ನಿವೇಶಗಳನ್ನು ಪೇರಿಸಿದ್ದಾರೆ. ಈ ಚಿತ್ರ ಎಲ್ಲಿ ಪ್ರಾರಂಭ ಆಗುವುದೊ ಅದೇ ಸ್ಥಳದಲ್ಲಿ ಚಿತ್ರೀಕರಣ ಮುಗಿಸಿ ಅದು ತೆರೆಯ ಮೇಲೆ ಹಾಗೆಯೇ ಮೂಡಿಬರಲಿದೆ.
ಐದು ಸಾಹಸ ಸನ್ನಿವೇಶಗಳು ಹಾಗೂ ಐದು ಸಾಹಸ ಒಳಗೊಂಡಿರುವ ‘ಜಟಾಯು’ ‘ಅಮೋಘ ಎಂಟೆರ್ಪೃಸೆಸ್’ ಚಿತ್ರ. ಬಿ. ಸುರೇಶ್ ಅವರ ಸಂಭಾಷಣೆ, ವಿನಯ್ ಚಂದ್ರ ಅವರ ಸಂಗೀತ, ಎಂ ಯು ನಂದಕುಮಾರ್ ಅವರ ಛಾಯಾಗ್ರಹಣ, ಕೆ ಎಂ ಪ್ರಕಾಷ್ ಅವರ ಸಂಕಲನ, ಹರ್ಷ, ಕಲೈ, ಮುರಳಿ, ರಾಮು ಅವರ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು ಹಾಗೂ ಮಾಸ್ ಮಾದ ಅವರ ಸಾಹಸ ‘ಜಟಾಯು’ ಚಿತ್ರಕ್ಕೆ ಇದೆ.
ನಾಯಕ ರಾಜ್ ಅವರಿಗೆ ಸುರಭಿ ಮತ್ತು ರೂಪಶ್ರೀ ನಾಯಕಿಯರು. ಅವಿನಾಷ್, ನಟರಾಜ್, ಬುಲ್ಲೆಟ್ ಪ್ರಕಾಷ್, ಪೆಟ್ರೋಲ್ ಪ್ರಸನ್ನ, ಕಿಲ್ಲರ್ ವೆಂಕಟೇಶ್, ಡ್ಯಾನಿ, ಸತೀಶ್, ಸಿದ್ದರಾಜ್ ಕಲ್ಯಾಂಕರ್, ಕುರುಪ್ ರಮೇಶ್ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.