ಅನಿ ಆರ್ಟ್ಸ್ ಲಾಂಛನದಲ್ಲಿ ಅನಿತಾರಾಣಿ ಅವರು ನಿರ್ಮಿಸಿರುವ ‘ಮಾನಸ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕೊಡ್ಲು ರಾಮಕೃಷ್ಣ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಜೆ.ಎಂ.ಪ್ರಹ್ಲಾದ್ ಕಥೆ ಬರೆದಿದ್ದಾರೆ. ವಿ.ಮನೋಹರ್ ಸಂಗೀತ, ಅಶೋಕ್ರಾಮನ್ ಛಾಯಾಗ್ರಹಣ, ಬಸವರಾಜ್ ಅರಸ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಶಿವಧ್ವಜ್, ಅನಿತಾರಾಣಿ, ಶಿವರಾಂ, ಶ್ರೀನಿವಾಸಮೂರ್ತಿ, ರಮೇಶ್ಭಟ್ ಮುಂತಾದವರಿದ್ದಾರೆ.
ಕೊಡ್ಲು ರಾಮಕೃಷ್ಣರವರ ಹೊಸ ಪ್ರಯತ್ನಕ್ಕೆ ಜನ ಹೇಗೆ ಸ್ಪಂದಿಸುತ್ತಾರೆ ಎಂದು ಕಾದು ನೋಡಬೇಕು.