ಈ ವಾರ ನಗುವಿನ ಹಬ್ಬದ ಸರದಿ. ಈಗಷ್ಟೇ ಯುಗಾದಿ ಹಬ್ಬ ಮುಗಿದು ಶ್ರೀ ವಿಜಯ ಸಂವತ್ಸರಕ್ಕೆ ಕಾಲಿಟ್ಟಿದೆವೆ. ಆರಂಭದಲ್ಲೇ ಪ್ರೇಕ್ಷಕ ಮಹಾಪ್ರಭು ನಗುವಿನ ಮೂಡಿನಲ್ಲಿ ಇರಲು ಎಸ್ ನಾರಾಯಣ ಅವರ ಪದ್ಮ ಸುಂದರಿ ಕ್ರಿಯೇಷನ್ ಅವರ ‘ಛತ್ರಿಗಳು ಸಾರ್ ಛತ್ರಿಗಳು’ ಚಿತ್ರ ಆಗಮಿಸುತ್ತಿದೆ. ಶ್ರೀಮತಿ ಭಾಗ್ಯವತಿ ಅರ್ಪಿಸುವ ‘ಛತ್ರಿಗಳು ಸಾರ್ ಛತ್ರಿಗಳು’ ಚಿತ್ರದ ನಿರ್ಮಾಪಕರು ಪವನ್ ಕಾರ್ತಿಕ್.
ಇದೊಂದು ತ್ರಿವಳಿ ಸಂಗಮ. ಎಸ್ ನಾರಾಯಣ್ ಅವರ ನಿರ್ದೇಶನ ರಮೇಶ್ ಅರವಿಂದ್ ಅವರ ಕಥೆ, ಎಸ್ ಮೋಹನ್ ಅವರು ಚಿತ್ರಕಥೆ ಹಾಗೂ ಸಂಭಾಷಣೆಯಲ್ಲಿ ಸಹಾಯ ಒದಗಿಸಿದ್ದಾರೆ. ಈ ಹಿಂದೆ ಕುರಿಗಳು ಸಾರ್ ಕುರಿಗಳು ಹಾಗೂ ಕೋತಿಗಳು ಸಾರ್ ಕೋತಿಗಳು ಚಿತ್ರಗಳಲ್ಲಿ ಈ ತ್ರಿವಳಿ ಸಂಗಮ ಆಗಿತ್ತು. ಇದೀಗ ಹ್ಯಾಟ್ರಿಕ್ ಸಂದರ್ಭ ಒದಗಿ ಬಂದಿದೆ.
ಎಸ್ ನಾರಾಯಣ್, ರಮೇಶ್ ಅರವಿಂದ್, ಮೋಹನ್ ಅವರು ಮತ್ತೊಮ್ಮೆ ಜೊತೆಯಾಗಿ ನಟಿಸಿರುವ ಚಿತ್ರದ ನಾಯಕಿಯರಾಗಿ ಮಾನಸಿ, ಸುಷ್ಮಾ, ಸನಾತನಿ, ಪವಿತ್ರ ಗೌಡ ಅವರ ಜೊತೆಗೆ ಹೆಸರಾಂತ ಪೋಷಕ ಕಲಾವಿದರಾದ ಶಿವರಾಮಣ್ಣ, ಸಾಧು ಕೋಕಿಲ, ಡಾಕ್ಟರ್ ಸುಂದರ್ ರಾಜ್, ರಂಗಾಯಣ ರಘು, ಬುಲ್ಲೆಟ್ ಪ್ರಕಾಷ್, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು ಹಾಗೂ ಇತರರು ಇದ್ದಾರೆ.
ತಾಂತ್ರಿಕ ವರ್ಗದಲ್ಲಿ ಜಗದೀಶ್ ವಾಲಿ ಅವರ ಛಾಯಾಗ್ರಹಣ, ಅರ್ಜುನ್ ಜನ್ಯ ಅವರ ಸಂಗೀತ, ಮಾಲೂರ್ ಶ್ರೀನಿವಾಸ್ ಹಾಗೂ ರಾಜು ಅವರ ನೃತ್ಯ ಸಂಯೋಜನೆ, ಡಿಫರೆಂಟ್ ಡ್ಯಾನಿ ಅವರ ಸಾಹಸ, ಲಿಂಗರಜು ಅವರ ಸಂಕಲನ, ರಾಜಾರಾಂ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕೆ ಇದೆ.