Untitled Document
Sign Up | Login    
Dynamic website and Portals
  
Home >> Movie Home >> ಗಜೇಂದ್ರ ಬರುತ್ತಿದ್ದಾನೆ ದಾರಿ ಬಿಡಿ
ಗಜೇಂದ್ರ ಬರುತ್ತಿದ್ದಾನೆ ದಾರಿ ಬಿಡಿ
ಗಜೇಂದ್ರ ಬರುತ್ತಿದ್ದಾನೆ ದಾರಿ ಬಿಡಿ
ಡೈಸಿ ಶಾ,ವಿನೋದ್ ಪ್ರಭಾಕರ್

ಭರ್ಜರಿ ಸಾಹಸದ ಜೊತೆ ಭಾವನೆಯ ಸಮ್ಮಿಲನವು ಆಗಿರುವ ‘ಗಜೇಂದ್ರ’ ಈ ವಾರ ತೆರೆಗೆ ಬರುತ್ತಿದೆ.

‘ಗಜೇಂದ್ರ’ ರಾರಾಜಿಸಲು ಸೆನ್ಸಾರ್ ಮಂಡಳಿಯಿಂದ ‘ಯು/ಎ’ ಪಡೆದ ಚಿತ್ರ ನಾಯಕ ವಿನೋದ್ ಪ್ರಭಾಕರ್ ಅವರ ಎರಡು ಮುಖಗಳ ಪರಿಚಯ ನಂಬಿದ ಜನರಿಗೆ ನೆರವಾಗುವ ಸಹಾಯವಾಗುವ ಕಥಾ ವಸ್ತು ಹೊಂದಿದೆ. ನಿರ್ಮಾಪಕರಾದ ಎಲ್ ಎನ್ ಗೌಡ ಹಾಗೂ ಮೇಕಪ್ ಬಸವರಾಜು ಅವರು ‘ಗಜೇಂದ್ರ’ ನಿರ್ಮಾಪಕರು.

‘ಗಜೇಂದ್ರ’ ಚಿತ್ರದ, ಕಥೆ, ಚಿತ್ರಕಥೆ, ನಿರ್ಮಾಣದ ಪಾಲು, ನಿರ್ದೇಶನ ಹಾಗೂ ಛಾಯಾಗ್ರಾಹಣ ಜೆ.ಜಿ. ಕೃಷ್ಣ ಅವರದು. ಅಂದು ಅಂಬರೀಶ್ ಹಾಗೂ ಸೋಮಶೇಖರ್ ಜೋಡಿ ‘ಗಜೇಂದ್ರ’ ಎಂಬ ಚಿತ್ರದಲ್ಲಿ ಪಾಲ್ಗೊಂಡಿದ್ದರು. ಇಂದು ಕೃಷ್ಣ ಮತ್ತು ವಿನೋದ್ ಪ್ರಭಾಕರ್ ಜೋಡಿ ‘ಗಜೇಂದ್ರ’ದಲ್ಲಿ ಒಂದಾಗಿದ್ದಾರೆ . ರಾಜೇಶ್ ರಾಮನಾಥ್ ಅವರ ಸಂಗೀತ ಹಾಗೂ ಹೊಸ ಗೀತಾ ಸಾಹಿತಿ ನವೀನ್ ಈ ಚಿತ್ರದಿಂದ ಪರಿಚಯ ಆಗುತ್ತಿದ್ದಾರೆ.

ಶೋಭರಾಜ್ ಈ ಚಿತ್ರದಲ್ಲಿ ಭ್ರಷ್ಟ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಮೋದ್ ಚಕ್ರವರ್ತಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗುರುರಾಜ್ ಹೊಸಕೋಟೆ ಮತ್ತೊಮ್ಮೆ ಮುಸ್ಲಿಂ ವ್ಯಕ್ತಿ ಆಗಿದ್ದಾರೆ ಹಾಗೂ ಹಾಡೊಂದನ್ನು ಬರೆದಿರುವರು. ಡೈಸಿ ಶಾ ಚಿತ್ರದ ಕಥಾ ನಾಯಕಿ. ನಾಯಕನಿಗೆ ಆಂಗ್ಲ ಬಾಷೆ ಹೇಳಿ ಕೊಡಲು ಸ್ವಾತಿ ಇದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited