ಶ್ರೀ ವೆಂಕಟೇಶ್ವರ ಕೃಪಾ ಎಂಟರ್ಟೈನರ್ಸ್ ಲಾಂಛನದಲ್ಲಿ ಉದಯ್.ಕೆ.ಮೆಹ್ತ ಅವರು ನಿರ್ಮಿಸಿರುವ, ಶಶಾಂಕ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಹಾಗೂ ಕಿಚ್ಚ ಸುದೀಪ್ ನಾಯಕರಾಗಿ ನಟಿಸಿರುವ ‘ಬಚ್ಚನ್’ ಚಿತ್ರ ಈ ವಾರ ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯಾದ್ಯಾಂತ 180 ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ.
ಚಿತ್ರದ ಹಾಡುಗಳು ಈಗಾಗಲೆ ಸಕ್ಕತ್ ಹಿಟ್ ಅಗಿದ್ದು, ರಾಜ್ಯಾದೆಲ್ಲಾಡೆ "ಬಚ್ಚನ್" ಹವಾ ಶುರುವಾಗಿದೆ.
"ಬಚ್ಚನ್" ಚಿತ್ರವು ಕನ್ನಡದ ಎರಡನೇ ಅತೀ ದುಬಾರಿ ಚಿತ್ರ ಎನ್ನಲಾಗಿದೆ.
ಸುದೀಪ್ ಗೆ ಜೋಡಿಗಳಾಗಿ ಪಾರೂಲ್ ಯಾದವ್, ತುಲಿಪ್ಜೋಷಿ, ಭಾವನಾ ಮೆನನ್ ಸಾಥ್ ನೀಡಿದ್ದಾರೆ.
ಆಶಿಶ್ ವಿದ್ಯಾರ್ಥಿ, ರವಿಶಂಕರ್ ಮತ್ತು ತೆಲುಗಿನ ಖ್ಯಾತನಟ ಜಗಪತಿ ಬಾಬು ಮುಂತಾದವರ ತಾರಾಬಳಗವಿರುವ ಈ ಚಿತ್ರಕ್ಕೆ ಶೇಖರ್ ಚಂದ್ರು ರವರ ಛಾಯಾಗ್ರಹಣವಿದೆ. ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಶ್ರೀ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಹರ್ಷ, ಚಿನ್ನಿಪ್ರಕಾಶ್ ಮತ್ತು ಇಮ್ರಾನ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.