'ರಾಜಕೀಯ ನಾಯಕರಿಗೊಂದು ಕಾಲ ಆದ್ರೆ, ಮತದಾರನಿಗೂ ಒಂದು ಕಾಲ’. 5 ವರ್ಷ ರಾಜಕೀಯ ನಾಯಕರು ತಮ್ಮ ತಾಳಕ್ಕೆ ತಕ್ಕಂತೆ ಮತದಾರರನ್ನು ಕುಣಿಸ್ತಾರೆ. ಆದ್ರೆ ಎಲೆಕ್ಷನ್ ಟೈಂ ಬಂದಾಗ ಮತದಾರ ನಾಯಕರನ್ನು ’ಗೊಂಬೆ ಆಡ್ಸದಂಗೆ’ ಆಡ್ಸ್ತಾರೆ. ಮತದಾರರನ್ನು ಓಲೈಸಲು ರಾಜಕೀಯ ನಾಯಕರು ’ಡ್ರಾಮಾ’ ದಾಟಿಯಲ್ಲಿ ಹಾಡ್ತಾ ಇದ್ದಾರೆ...
ಓಟು ಹಾಕವ್ರು ತುಂಬಾ ಒಳ್ಳೆವ್ರು
ನಮ್ಮ ತಪ್ಪನ್ನಾ ಮರ್ತೇ ಬಿಡ್ವನು iiಪii
ಲಗಾಮು ಅವ್ರ ಕೈಲಿ ನಾವೇನ್ ಮಾಡೋಣಾ
ಎಲ್ಲಾರು ಮುಖಾ ಮುಚ್ಕೊಂಡ್ ಡ್ರಾಮಾ ಆಡೋಣ ii೧ii
ಬಿಜೆಪಿ ಬಡವಾಯ್ತು, ಕಾಂಗ್ರೆಸ್ಸು ಕಚ್ಚಾಡ್ತು
ಕೆಜೆಪಿ ಕಂಗಾಲಾಯ್ತು, ಜೆಡಿಎಸ್ ಜಮಾಯ್ಸ್ತು....
ದುಡ್ಡನ್ನು ಕೊಟ್ಟಾಯ್ತು, ಎಣ್ಣೆನಾ ಚೆಲ್ಲಾಯ್ತು
ಸೀರೆನಾ ಹಂಚಾಯ್ತು ಯಾಕೆ ದುಸ್ರಾ ಮಾತು..
ಇಷ್ಟೆಲ್ಲಾ ಕೊಟ್ಮೇಲೆ ಓಟು ಬರ್ದೆ ಇರ್ತದಾ...?
ಮತವೆಲ್ಲ ಬಂದ ಮೇಲೆ ಖುರ್ಚಿ ಬಿಟ್ಟು ಹೋಯ್ತದಾ..?
ನಮ್ಮ ಕೈಲಿ ಆಗೋದೆಲ್ಲಾ ನಾವು ಮಾಡೋಣಾ
ರಿಸಲ್ಟು ಬರೋತನಕಾ ಕಾದು ನೋಡೋಣಾ ii೨ii
ಪ್ರತಿಯೊಂದು ಪಕ್ಷಕ್ಕೂ ಒನ್ನೊಂದು ಕಲ್ಲರು
ಇಲ್ಲೊಬ್ಬ ಸ್ಕ್ಯಾಮಂತ್ರಿ, ಅಲ್ಲೊಬ್ಬ ದೊಡ್ ಕಂತ್ರಿ....
ಪಕ್ಷದ ಮೆಟಡೋರು, ಓಡಿಸೋ ಲೀಡರು
ಪಕ್ಷಾನಾ ಬೀಳ್ಸವ್ರೆ ಯಾರಪ್ಪಾ ಏಬ್ಸವ್ರು...
ಮತದಾರ ಒಲಿಯೋವರ್ಗೂ ನಿಲ್ಲಬೇಡ ನೀನೆಲ್ಲೂ...
ಕ್ಯಾಂಪೆನು ಮಾಡುತ್ತಲೆ ಓಟುಗಳ ನೀಗೆಲ್ಲು ....
ಮತದಾರ ರೋಡಲ್ ಸಿಕ್ರೆ ನಾವೇನ್ ಮಾಡೋಣ....
ಇನ್ನಷ್ಟು ಎಣ್ಣೆ ಹೊಡ್ಸಿ ಓಟು ಕೇಳೋಣ..ii೩ii